Thursday, 12 December 2019

ತುಳು ಯಕ್ಷಗಾನ

ತುಳು ಯಕ್ಷಗಾನ




ಯಕ್ಷಗಾನದಲ್ಲಿ ಭಾಷೆ,ಪ್ರಸಂಗ ಮತ್ತು ವೇಷಭೂಷಣಗಳಲ್ಲಿ ವೈಶಿಷ್ಟ್ಯತೆಗಳನ್ನು ಮೈಗೂಡಿಸಿಕೊಂಡಿರುವ ತುಳು ಯಕ್ಷಗಾನ ಪರಂಪರೆಯನ್ನು ವಿದ್ವಾಂಸರು "ತುಳುತಿಟ್ಟು" ಎಂದು ಗುರುತಿಸಿಕೊಂಡಿದ್ದಾರೆ. ಇದು ತೆಂಕುತಿಟ್ಟು ಯಕ್ಷಗಾನದ ಪ್ರಭೇದವಾಗಿ ವ್ಯವಸಾಯಿ ಮೇಳವಾಗಿ ಬೆಳೆದು ಬಂತು.ತುಳು ಯಕ್ಷಗಾನವು ತುಳುನಾಡಿನಲ್ಲಿ ಉಗಮವಾದರೂ,ಅದರ ಮಾಧ್ಯಮ ಕನ್ನಡವೇ ಆಗಿದ್ದಿತು. ಹಿಂದಿನ ದಿನಗಳಲ್ಲಿ ಕನ್ನಡ ಭಾಷೆಯೇ ಪ್ರಧಾನವಾಗಿದ್ದರಿಂದ ತುಳು ಭಾಷೆಯ ಪ್ರಸಂಗಗಳು-ಪ್ರದಶ‌‌ನಗಳು ವಿಫುಲವಾಗಿ ಕಂಡು ಬರುತ್ತದೆ.

ತುಳು ಯಕ್ಷಗಾನ ಬೆಳೆದು ಬಂದ ರೀತಿ
೧೮೮೭ರಲ್ಲಿ ಬಾಯಾರು ಪೆರುವಡಿ ಸಂಕಯ್ಯ ಭಾಗವತರು ರಚಿಸಿದ "ಪಂಚವಟಿ-ವಾಲಿಸುಗ್ರೀವೆರೆ ಕಾಳಗೊ" ಎಂಬುದು ತುಳು ಭಾಷೆಯಲ್ಲಿ ದೊರಕಿದ ಮೊದಲ ಉಪಲಬ್ದ ಪ್ರಸಂಗ ಕೃತಿ. ಅನಂತರ ಮೂವತ್ತರ ದಶಕದಲ್ಲಿ "ಕೃಷ್ಣ ಸಂಧಾನ","ಅಂಗದ ಸಂಧಾನ"ಮೊದಲಾದ ಪ್ರಸಂಗ ಕೃತಿಗಳು ರಚನೆಯಾದವು. ೧೯೨೯ರಲ್ಲಿ ಪಂದಬೆಟ್ಟು ವೆಂಕಟರಾಯರು ಕೋಟಿ-ಚೆನ್ನಯ ಎಂಬ ಅವಳಿ ಪುಣ್ಯಪುರುಷರ ಸಾಹಸಗಾಧೆಯನ್ನು ತುಳು ಯಕ್ಷಗಾನ ಪ್ರಸಂಗಕ್ಕೆ ಅಳವಡಿಸಿದ ಮೊದಲ ಪ್ರಯತ್ನವಾಗಿದೆ. ಪ್ರಾರಂಭದ ದಿನಗಳಲ್ಲಿ ಕನ್ನಡ ಯಕ್ಷಗಾನಗಳು ಜನಪ್ರೀಯಗೊಂಡರೂ ತುಳುನಾಡಿನ ಜನತೆ ತುಳು ಭಾಷೆಯ ಯಕ್ಷಗಾನಕ್ಕೆ ಒಲವು ತೋರಿಸಿದ್ದರ ಪರಿಣಾಮವಾಗಿ ಜಾನಪದ,ಐತಿಹಾಸಿಕ,ಕಾಲ್ಪನಿಕ ಪ್ರಸಂಗಗಳ ಟೆಂಟ್ ಮೇಳಗಳು ಹುಟ್ಟಿಕೊಂಡವು.

ತುಳು ಯಕ್ಷಗಾನ ಪ್ರಸಂಗಗಳು



  1. ತುಳುನಾಡಸಿರಿ
  2. ಕಾಡಮಲ್ಲಿಗೆ
  3. ತುಳುನಾಡ ಬಲಿಯೇಂದ್ರ
  4. ಕೋಟಿ-ಚೆನ್ನಯ
  5. ನಾಗಸಂಪಿಗೆ
  6. ಬಹ್ಮಮೊಗೆರರು[೭]
  7. ಕೋಡ್ದಬ್ಬು
  8. ಕಲ್ಕುಡ-ಕಲ್ಲುಟಿ‍
  9. ಗೆಜ್ಜೆದ-ಪೂಜೆ [೮]
  10. ಅಮರ್ ಬೊಳ್ಳಿಲು [೯]
  11. ಬಾರಗ
  12. ಕಾಂತಬಾರೆ-ಬೂದಾಬಾರೆ
  13. ದೇವುಪೂಂಜ ಪ್ರತಾಪ
  14. ಬ್ರಹ್ಮ-ಬಲಾಂಡಿ
  15. ಸತ್ಯದಪ್ಪೆ ಚೆನ್ನಮ್ಮ
  16. ಬನತ್ತ ಬಂಗಾರ್
  17. ಬನತ್ತ ಬೊಬ್ಬರ್ಯೆ
  18. ಕಚ್ಚೂರ ಮಡಿ
  19. ಬಾಲೆ ಭಾಗ್ಯವಂತೆ

ತುಳು ಯಕ್ಷಗಾನ ಮೇಳಗಳು
  1. ಶ್ರೀ ಸೋಮನಾಥೇಶ್ವರ ಮೇಳ ಇರಾ ಸುರತ್ಕಲ್
  2. ಕನಾ‍ಟಕ ನಾಟಕ ಸಭಾ ಮಂಡಳಿ ಮಂಗಳೂರು
  3. ಶ್ರೀ ಮಂಜುನಾಥೇಶ್ವರ ಯಕ್ಷಗಾನ ಮಂಡಳಿ ಕದ್ರಿ
  4. ಶ್ರೀ ಗೋಪಾಲಕೃಷ್ಣ ಯಕ್ಷಗಾನ ಮಂಡಳಿ ಕುಂಬಳೆ
  5. ಬಪ್ಪನಾಡು ಮೇಳ
  6. ಸುಬ್ರಹ್ಮಣ್ಯ ಮೇಳ
  7. ಮಂಗಳಾದೇವಿ ಮೇಳ
  8. ಕುಂಟಾರು ಮೇಳ
  9. ಮಧೂರು ಮೇಳ
  10. ಪುತ್ತೂರು ಮೇಳ

✓ ಸಂಗ್ರಹ -- Wikipedia

Tuesday, 22 January 2019

ಕಂಬಳದ ಹಿನ್ನಲೆ

ಕಂಬಳದ ಹಿನ್ನಲೆ


ತುಳುನಾಡಿನಲ್ಲಿ ಕಂಬಳದ ಆಚರಣೆ ಸುಮಾರು 800-900 ವರುಶಗಳ ಹಿಂದಿನಿಂದಲೇ ನಡೆದುಕೊಂಡು ಬಂದಿದೆ. #ಉಡುಪಿ ತಾಲೂಕಿನ ಕೆಂಜೂರಿನ ಸಮೀಪದ ಕರ‍್ಜೆ ಎಂಬಲ್ಲಿ ದೊರಕಿದ ಆಳುಪ ರಾಣಿ ಬಲ್ಲಮಹಾದೇವಿಗೆ ಸಂಬಂದಿಸಿದ ಕಲ್ಬರಹದಲ್ಲಿ ಕಂಬಳದ ಬಗ್ಗೆ ಹೇಳಲಾಗಿದೆ. “ಸುಗ್ಗಡಿಯ ಕಂಬಳಕ್ಕೆ ಎರಡು ಎತ್ತು ಕರೆತರಬಹುದು” ಎಂದು ಇದರಲ್ಲಿ ಹೇಳಲಾಗಿದೆ.

1) ಇದರ ಕಾಲ ಕ್ರಿ. ಶ.1200 (ಶಕ ವರುಶ 1281). ಕಂಬಳ ಆಚರಣೆಯು ಸುಗ್ಗಿ ಬೆಳೆಯ ಬಿತ್ತನೆಯ ಸಮಯದಲ್ಲಿ ನಡೆಯುತ್ತದೆ. ಕುಂದಾಪುರ ಕನ್ನಡದಲ್ಲಿ ಸುಗ್ಗಿ ಅಗೇಡಿ ಎಂದರೆ ಸುಗ್ಗಿಯ ನೇಜಿ ಬಿತ್ತುವ ಜಾಗ. ಸುಗ್ಗಿ ಅಗೇಡಿ > ಸುಗ್ಗೇಡಿ > ಸುಗ್ಗಾಡಿ ಎಂದು ಪ್ರಯೋಗವಾಗಿರಬಹುದು ಎಂದು ತಿಳಿವಿಗರು ಅಬಿಪ್ರಾಯಪಟ್ಟಿದ್ದಾರೆ. ಕ್ರಿ. ಶ. ಹನ್ನೆರಡನೆಯ ನೂರೇಡಿನಲ್ಲಿಯೇ ಸುಗ್ಗಿಯ ಕಾಲದಲ್ಲಿ ಕಂಬಳ ನಡೆಯುತ್ತಿದ್ದದನ್ನು ಕಲ್ಬರಹದ ಹೇಳಿಕೆ ತಿಳಿಸುತ್ತದೆ. ಇದರಿಂದ ಕಂಬಳ ಕನಿಶ್ಟ ಎಂಟುನೂರು ವರುಶಗಳಿಂದ ಆಚರಿಸಲ್ಪಡುತ್ತಾ ಬಂದಿದೆ ಎಂದು ಸ್ಪಶ್ಟವಾಗುತ್ತದೆ. ಕ್ರಿ. ಶ.1402ರ ಬಾರಕೂರು ಕಲ್ಬರಹದಲ್ಲಿ ‘ಆ ಗದ್ದೆಯ ಕೆಳಗಿನ ಕಂಬಳ ಬಗ್ಗೆ’ ಎಂದು ಹೇಳಲಾಗಿದೆ.

2) ಕ್ರಿ. ಶ. 1421ರ ಬಾರಕೂರು ಕಲ್ಬರಹದಲ್ಲಿ “ದೇವರು ಸಾವಂತನ ಕಂಬಳ ಗದ್ದೆಯ ಮೇಲೆ” ಎಂದು ಕಂಬಳಗದ್ದೆಯನ್ನು ಹೇಳಲಾಗಿದೆ.

3) ಕ್ರಿ. ಶ. 1424ರ ಬಾರಕೂರು ಕಲ್ಬರಹದಲ್ಲಿ “ಹೊತ್ತಾಗಿ ಮಾಡಿದ ಕಂಬಳ ಗದ್ದೆ” ಎಂದಿದೆ.

4) ಕ್ರಿ. ಶ. 1437ರ ಉಡುಪಿ ಕಲ್ಬರಹವು “ಮೂಲವಾಗಿ ಕೊಡಬಾಳು ಕಂಬಳ ಗದ್ದೆ ಕೊಯಿಲ್ ಹದಿನಾರು” ಎಂದಿದೆ.

5) ಕ್ರಿ. ಶ. 1482ರ ಕೊಲ್ಲೂರು ಕಲ್ಬರಹದಲ್ಲಿ “ಅವರಿಗೆ ಒಬ್ಬ ಬಾಳು ಕಂಬಳ ಗದ್ದೆ” ಎಂದು ಹೇಳಲಾಗಿದೆ.

6) ಕ್ರಿ. ಶ. 1521ರ ಬಾರಕೂರು ಕಲ್ಬರಹದಲ್ಲಿ ಕಂಬಳ ಗದ್ದೆಯಲಿ ನಡುಹುಣಿ” ಎಂದು ಹೇಳಲಾಗಿದೆ.

7) ಕ್ರಿ. ಶ. 1676ರ ಸುಬ್ರಹ್ಮಣ್ಯದ ಕಲ್ಲುಮಾಣೆರು ಶಂಕರದೇವಿ ಬಲ್ಲಾಳ್ತಿಯ ಹೆಸರಿನಲ್ಲಿರುವ ಕಲ್ಬರಹದಲ್ಲಿ “ನನ್ನ ಕಂಬಲ ಗದ್ದೆಯಿಂದ ನಡೆಸಬಹುದು” ಎಂಬಲ್ಲಿ ಕಂಬಳಗದ್ದೆಯ ಬಗ್ಗೆ ಹೇಳಲಾಗಿದೆ.
Credit: Tulunad State- Facebook Page.

Sunday, 20 January 2019

ಅಳುಪ ಉತ್ಸವ :- ಬಾರಕೂರು

ಅಳುಪ ಉತ್ಸವ :- ಬಾರಕೂರು
ನೋಡ ಬನ್ನಿ ನಮ್ಮ ಬಾರಕೂರು ಐತಿಹಾಸಿಕ ನಗರಕ್ಕೆ
Credit: Beauty of Tulunad - Page .

ಇತಿಹಾಸದಲ್ಲಿ ತುಳುನಾಡ ಅರಸರ ರಾಜಧಾನಿಯಾಗಿದ್ದ ಬಾರಕೂರಿನಲ್ಲಿ ಅಳುಪ ಉತ್ಸವಕ್ಕೆ (ಜನವರಿ. 25, 26, 27) ಸರ್ವರಿಗೂ ಆತ್ಮೀಯ ಸ್ವಾಗತ






ಪ್ರತಿಯೋಂದು ಊರಿಗೂ ತನ್ನದೇ ಆದ ಹಿನ್ನಲೆಯಿರುತ್ತದೆ. ಈ ಹಿನ್ನಲೆಯಿಂದ ಆ ಗ್ರಾಮದ ಹೆಸರು ಪ್ರಸಿದದ್ವಾಗಲು ಸಾದ್ಯ ಅದೇ ರೀತಿ ಉಡುಪಿಯಿಂದು ಸುಮಾರು 16 ಕಿ.ಮೀ ಅದೇ ರೀತಿ ಕುಂದಾಪುರದಿಂದ 23 ಕಿ.ಮೀ ದೂರವಿರುವ ಇತಿಹಾಸ ಪುಟದಲ್ಲಿ ತನ್ನ ಹೆಸರನ್ನು ಹೊಂದಿರುವ ಊರು ಬಾಕರ್ೂರು.ತುಳುನಾಡಿನ ರಾಜಧಾನಿಯಾಗಿ ಮೆರೆದಿದ್ರೂ ಇಲ್ಲಿ ತುಳು ಭಾಷೆ ಮಾತನಾಡುವ ಜನಯಿಲ್ಲ ಎಂಬುದು ನಿಜಕ್ಕೂ ಅಚ್ಚರಿಯ ಸಂಗತಿ ಅಲ್ಲವೇ?

ಹಿಂದಿನ ಕಾಲದಲ್ಲಿ ಪಟ್ಟಣಗಳು, ರಾಜದಾನಿಗಳು ರಾಜಾಶ್ರಯದಿಂದ ಪ್ರವರ್ಧಮಾನಕ್ಕೆ ಬಂದುನಂತರ ಕ್ರಮೇಣ ಕಾದ ರಾಜಕೀಯ ಬದಲಾವಣೆಯೊಂದಿಗೆ ನಶಿಸಲ್ಪಡುತ್ತಿದ್ದವು. ಆದರೆಕರಾವಳಿಯ ಈ ಪಟ್ಟಣಬಾರಕೂರುಕಾಲಕ್ಕೆ ಸವಲಾಗಿ ನಿಂತಿದೆ.

ಬಾ ಯಾತ್ರಿಕನೇ ಕೈ ಮುಗಿದು ಒಳಗೆ ಬಾ ಇದು ಬರಿಯ ಶಿಲೆಯಲ್ಲ,ಶಿಲ್ಪಕಲೆಯತವರೂರು ಎಂಬತೆಇಲ್ಲಗೆ ಬರುವವರನ್ನು ಸ್ವಾಗತಿಸಲು ನಿಂತಿದೆಯೋ ಎಂಬಂತಿದೆ ಬಾರಕೂರಿನ ಪ್ರವೇಶ ದ್ವಾರದಲ್ಲಿ ಇರುವಕಲ್ಲಿನ ಚಪ್ಪರ ಕಲ್ಲು ಚಪ್ಪರಇಲ್ಲಿ ಕಲ್ಲೂ ಕಲ್ಲುಗಳು ಕೂಡ ಇತಿಹಾಸ ಹೇಳುತ್ತದೆ. ಪ್ರತಿ ಕಲ್ಲಿನಲ್ಲಿ ಶಿಲ್ಪ ಅರಳಿ ನಿಂತಿದೆ.ಪ್ರತಿ ಶಿಲ್ಲಕ್ಕೂ ಒಂದೊಂದು ಕಥೆಯಿದೆ. ಇವೆಲ್ಲವೂ ಶ್ರೀಮಂತ ಬಾರಕೂರಿನ ಗತವೈಭವವನ್ನು ಸಾರುತಾ ನಿಂತಿದೆ.

ಬಾರಕೂರು ದೇವಾಲಯಗಳ ಬೀಡು ಇಲ್ಲಿ 365 ದೇವಾಲಗಳಿದ್ದು ಪ್ರತಿದಿನವೂ ಒಂದೊಂದು ದೇವಾಲಯದಲ್ಲಿ ಉತ್ಸವ ನಡೆಯುತ್ತಿತ್ತು ದೊರೆಯು ಪ್ರತಿ ದಿನ ಒಂದೊಂದು ದೇವಾಲಯಕ್ಕೆ ಭೇಟಿ ನೀಡಿ ದೇವರ ಸೇವೆ ಮಾಡುತ್ತಿದ್ದನು ಎಂದು ಸ್ಥಳ ಪುರಾಣ ಹೇಳುತ್ತದೆ.ಇಂದು ಕೂಡ ನಮ್ಮ ಸಮುದಾಯದ ಕುಲ ದೇವಸ್ಥಾನಗಳು ಇರುವುದು (ಹೆಚ್ಚಿನ) ಇದೇಬಾರಕೂರಿನಲ್ಲಿ. ಇದರ ಇತಿಹಾಸವನ್ನು ಅವಲೋಕಿಸಿದೆರೆಇದು ಹಿಂದೆ ವ್ಯಾಪಾರ ಕೇಂದ್ರವಾಗಿದ್ದು,ವಿಜಯನಗರ ಅರಸರು ಇಲ್ಲಿ ಕೋಟೆಯನ್ನು ನಿಮರ್ಾಣ ಮಾಡಿದ್ದರು ಇದರ ಸಮೀಪ ಹೊಸನಾಳದಲ್ಲಿ ದೊರೆತಿರುವ ಸುಮಾರು 9 ನೇ ಶತಮಾನದ ವೀರಗಲ್ಲಿನಲ್ಲಿಬರಕನೂರು ಎಂಬ ಹೆಸರಿದೆ.ಮುಂದೆ ಇದು ಬಾರಕೂರು ಆಗಿರಬಹುದು. ಬಾರಕೂರಿನ ಘನತೆ ಎಷ್ಟೊಂದು ಪಸರಿಸಿತ್ತು ಎಂದರೆ ಹೊಯ್ಸಳರ 12ನೇ ಶತಮಾನದ ಶಾಸನದಲ್ಲಿ ಪಶ್ಚಿಮ ಘಟ್ಟವನ್ನು ಬಾಕರ್ೂರು ಘಟ್ಟ ಎಮದು ಕರೆಯಲಾಗಿದೆ.

ವಿಜಯನಗರದ ಅರಸರು ಇಲ್ಲಿ 80 ಕ್ಕೂ ಹೆಚ್ಚಿನ ರಾಜ್ಯಪಾಲರನ್ನು ನೇಮಕ ಮಾಡಿದ್ದರೆಂದು ಇತಿಹಾಸ ಹೇಳುತ್ತದೆ. ವಿಜಯನಗರದ ನಂತರ ಕಳದಿಯ ಅರಸರು ರಾಜ್ಯಭಾರ ಮಾಡುತ್ತಿದ್ದು,ಬಿಜಾಪುರದ ಆದಿಲ್ಸಾಹಿ ದಾಳಿಯಿಂದ ಬಾಕರ್ೂರು ಸುಟ್ಟು ಹೋಯಿತು ಎಂಬುದಾಗಿ ತೆಳಿಸುತ್ತದೆ. ಇಲ್ಲಿ ಸುವ್ಯವಸ್ಥಿತವಾದ ಸಾಮಾಜಿ ವ್ಯವಸ್ಥೆಯಿದ್ದು,ವ್ಯಾಪಾರ ವ್ಯವಹಾರಗಳು ಪರಸ್ಪರ ಪೂರಕವಾಗಿದ್ದು ಇದು ಸಮೃದ್ದವಾಗಿ ಬೆಳೆಯಲು ಕಾರಣವಾಯಿತು.ಆಡಳಿತದ ಹಿತದೃಷ್ಟಿಯಿಂದ ರಾಜರು ಇದನ್ನು ಕೇರಿಗಳಾಗಿ ವಿಂಗಡಿಸಿದ್ದರು ಅದು ಈಗಲೂ ಅದೇ ಹೆಸರಿನಿಂದ ಕರೆಯಲ್ಪಡುತ್ತದೆ.

ಕೋಟೆಕೇರಿ, ಮೂಡುಕೇರಿ, ಚೌಳಿಕೆರಿ, ಹೊಸಕೇರಿ ಇತ್ಯಾದಿ.1440 ಶಾಸನವು ಪೌರಾಡಳಿತದ ಬಗ್ಗೆ ತಿಳಿಸುತ್ತದೆ.ಜನತೆಗೆ ಹಕ್ಕುಬಶಾದ್ಯತೆಯ ಬಗ್ಗೆ ತಿಳಿಸುವ ಶಾಸನವು1407 ರ ಶಾಸನ ನೀಡುತ್ತದೆ.ಅಳುಪರ ಹಾಗೂ ವಿಜಯನಗರದ ಶಾಸನದಲ್ಲಿ ಕೋಟೆ ಬಳಿ ವೀರ ಪರಿವಾರ ದೇವರ ಬಳಿ ಬಿಲ್ಲು,ಬಾಣ,ಗುರಾಣಿ ಮುಂತಾದ ಬಗ್ಗೆ ಉಲ್ಲೇಖವಿದೆ. ಅಲ್ಲದೆ ಅಲ್ಲಿನ ಗೋಡೆಗಳ ಮೇಲೆಯಿರುವ ಉಬ್ಬುಶಿಲ್ಪಗಳು ಅಂದಿನ ಕಲಾ ಪ್ರಕಾರ ಮತ್ತು ಯುದ್ದದ ಸ್ಥಿತಿಗತಿಗೆ ಹಿಡಿದ ಕನ್ನಡಿಯಾಗಿದೆ.ಶತ್ರಗಳ ಅನಿರೀಕ್ಷಿತ ದಾಳಿಯಿಂದ ಸೈನಿಕರನ್ನು ರಕ್ಷಿಸಲು ಕೋಟೆಗಳ ಬಳಿ ಸುರಂಗ ಮಾರ್ಗ ನಿಮರ್ಿಸಲಾಗಿದೆ ಅದರ ಕುರುಹುಗಳು ಈಗಲೂ ನಮ್ಮ ಮುಂದೆಯಿದೆ. ಬಾರಕೂರಿನ ಅರಸೊತ್ತಿಗೆಯನ್ನು ನೆನಪಿಸುವ ಸಿಂಹಾಸನ ಸಿಂಹಾಸನಗುಡ್ಡೆಯೆಂಬಲ್ಲಿ ಈಗಲೂ ನಮಗೆ ಕಾಣ ಸಿಗುತ್ತದೆ.

ಜೈನ ಧರ್ಮದವರು ಇಲಿ ನೆಲೆಸಿದದ್ರು ತಮ್ಮದೇ ಆದ ಧಾಮರ್ಿಕ ಕೇಂದ್ಗರಗಳನ್ನು ರಚನೆ ಮಾಡಿಕೊಂಡಿದ್ದರು.ಇದಕ್ಕೆ ಸಾಕಿಯಾಗಿ ನಿಂತಿದೆ ಕತ್ತಲೆ ಬಸದಿ.ಇಲ್ಲಿನ ಅನೀಕ ದೇವಾಲಯಗಳಲ್ಲಿ 2 ನೇ ಶತಮಾನಕ್ಕೆ ಸೇರಿದೊಂದೇ ಸಂಕೀರ್ಣದಲ್ಲಿರುವ ಜೋಡಿ ದೇಗುಲಬಹುಮುಖ್ಯವಾದದು,ಎರಡೂ ದೇವಾಲಯಗಳು ತಳವಿನ್ಯಾಸದಲ್ಲಿ ಗರ್ಭಗೃಹ,ಸುಖನಾಸಿ ಹಾಗೂ ಸ್ತಂಭಗಳ ಮುಖ ಮಂಟಪಗಳನ್ನಿ ಒಳಗೊಂಡಿದೆ.

ಸುಮಾರು 11 ಶತಮಾನದ ಶಾಸನ ಪ್ರಕಾರ ಬಾರಕೂರಿನಲಿ ಜೈನ ಧರ್ಮ ಉಗಮಿಸಿತು ವಿಜಯನಗರದ ಶಾಸನಗಳು ಬಸದಿಗಳಲ್ಲಿ ನಿಮರ್ಾಣವಾಗಿತ್ತು ಇಲ್ಲಿನ ವರ್ತಕರು ಹೆಚ್ಚಿನವರು ಜೈನರಾಗಿದ್ದುಪೌರಾಡಳಿತದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು..ಬಾರಕೂರಿನಲ್ಲಿ ವೀರಶೈವ ಅನುಯಾಯಿಯಾದಕೆಳದಿ ಅರಸರ ಆಡಳಿತಕ್ಕೆ ಬಂದ ನಂತ ನಂತರ ಜೈನ ಧರ್ಮ ಕಡಿಮೆಯಾಯಿತು.1149 ರ ಹೊಯ್ಸಳ ಶಾಸನದಲ್ಲಿ ಬಾರಕೂರು ತನ್ನ ರಾಜ್ಯದ ಒಂದು ಅಂಗವೆಂದು ಹೇಳಲಾಗಿದೆ.ಇನ್ನೋಂದು ಕುತೂಹಲಕಾರಿ ಸಂಗತಿಯೆಂದರೆ ಕುಂದಕನ್ನಡವುಬಾರಕೂರು ಮತ್ತು ಬಸ್ರೂರು ಈ ಎರಡು ಪಟ್ಟಣಗಳಲ್ಲಿ ಅಳಿಯ ಕಟ್ಟು ಸಂಪ್ರದಾಯ ಉಗಮವಾಯಿತು ಎಂದು ಹೇಳಲಾಗಿದೆ.ದಕ್ಷಿಣ ಕನ್ನಡ ಇತಿಹಾಸದಲ್ಲಿಬಾರಕೂರಿನಲ್ಲಿ ದೊರೆತ ಮೂಡುಕೇರಿಯಲ್ಲಿ ದೊರೆತ ಶಾಸನದಲ್ಲಿ ತುಳು ವಿಷಯ ದಾಖಲಾಗಿದೆ ಅದೇ ರೀತಿ ವಿಜಯನಗರದ ಶಾಸನದಲ್ಲಿ ಬಾರಕೂರನ್ನು ತುಳು ರಾಜ್ಯವೆನ್ನಲಾಗಿದೆ.

ಬಾರಕೂರು ಅಳುಪರ ರಾಜಧಾನಿಯಾಗಿದ್ದು,ಅಳುಪ ಅರಸು ಅಳುಪೇಂದ್ರ ಕಾಲದಲ್ಲಿ1139 ಇವನ ಪ್ರಥಮ ಶಾಸನಪಂಚಲಿಂಗೇಶ್ವ ದೇವಾಲಯದಲ್ಲಿದೆ.ದ.ಕ ನೇರವಾಗಿ ಆಡಳಿತ ನಡೆಸಿದ ಕರ್ನಾಟಕ ದ ಪ್ರಥಮ ರಾಜರಾದ ಹೊಯ್ಸಳರು ಕ್ರ.ಶ1333 ರಲ್ಲಿ ಅಳುಪ ರಾಜ್ಯದ ಮೀಲಿನ ಹೊಯ್ಸಳರ ಆಕ್ರಮಣ ಇಲ್ಲಿನ ಇತಿಹಾಸದಲ್ಲಿಮಹತ್ವದ ಬದಲಾವಣೆಯನ್ನುಂಟುಮಾಡಿತು.ಈ ಹೊಯ್ಸಳ ಸೇನೆಯನ್ನು ಹಿಮ್ಮೆಟಿಸುವುದು ಅಸಾದ್ಯವೆಂದು ಮನಗಂಡ ಅಳುಪರಾಜ ಸೋಯಿದೇವರಾಜಕುಮಾರಿ ಚಿಕ್ಕಾಯಿತಾಯಿಯನ್ನು ಹೊಯ್ಸಳ ಅರಸುಮುಮ್ಮಡಿ ಬಲ್ಲಾಳನಿಗೆ ವಿವಾಹ ಮಾಡಿಕೊಟ್ಟ ಇವರು ತುಳುನಾಡಿನಲ್ಲಿ ಆಳ್ವಿಕೆ ಮಾಡತೊಡಗಿದರು. ಇಲ್ಲಿ ಸಿಕ್ಕಿದ ಪ್ರತಿಯೊಂದು ಶಾಸನವು ಆಗಿನ ಕಾಲದ ಇತಿಹಾಸಕ್ಕೆ ಸಾಕ್ಷಿಯಾಗಿದೆ.ಈ ಶಾಸನವು ಯಾರದೋ ಬಚ್ಚಲ ಮನೆಯ ಕಲ್ಲುಗಳಾಗದೆಅದರ ರಕ್ಷಣೆಯನ್ನು ಮಾಡಬೇಕಾಗಿದೆ. ಬಾರಕೂರು ಉತ್ಖನನ ನಡೆಸಿ ಅದರ ಬಗ್ಗೆ ಹೆಚ್ಚಿನ ಅದ್ಯಯನ ನಡೆಸಬೇಕಾಗಿದೆ. ಮಾಹಿತಿ : ರಾಘವೇಂದ್ರ ಪ್ರಭು, ಉಡುಪಿ, ಉಪನ್ಯಾಸಕರು | Courtesy : Beauty of Tulunad

Monday, 10 December 2018

ಮಾಣಿ ಗುತ್ತುವಿನಲ್ಲಿ 08.12.2018 ರಂದು ಕಂಬಳಕೋರಿ ನಡೆಯಿತು - Beauty of Tulunad

" ಮಾಣಿ ಗುತ್ತುವಿನಲ್ಲಿ 08.12.2018 ರಂದು ಕಂಬಳಕೋರಿ ನಡೆಯಿತು " - Beauty of Tulunad

ಮಾಣಿಯ ಮಣ್ಣಿನ ಸಂಸ್ಕ್ರತಿಯಲ್ಲಿ ಕಂಬಳಕೋರಿ ಗ್ರಾಮದ ಕೃಷಿ ಸಂಸ್ಕ್ರತಿಯ ಹಬ್ಬಕ್ಕೆ ಅದರದೇ ಆದ ಮಹತ್ವ ಇದೆ.

ಪ್ರಾಚೀನ ಕಾಲದ ಕೃಷಿ ಸಂಸ್ಕ್ರತಿಯ ಫಲಕೃತಿಗೆ ಇಂದಿಗೂ ಸಾಕ್ಷಿ ಮಾಣಿ ಗ್ರಾಮದ ಬಾಕಿಮಾರು ಮತ್ತು ಕಂಬಳದ ಗದ್ದೆಗಳು. ಮಾಣಿಯ ಮಣ್ಣಿನಲ್ಲಿ ನಡೆಯುವ ಕಂಬಳಕೋರಿ ಆಚರಣೆ ವಿಶಿಷ್ಟವಾದದು.ಮಾಣಿ ಎಂದರೆ ನಾಗಾರಾದನೆಗೆ ಸಂಬಂಧಿಸಿದ ಭೂಮಿ. ಪ್ರಾಚೀನ ಕಾಲದಿಂದಲೂ ಮಾತ್ರವಲ್ಲದೆ ನಾಗಬ್ರಹ್ಮನ ಆರಾಧನೆ ಕೂಡ ಇದೆ. (Follow Beauty of Tulunad facebook page)

ಕಂಬಳಕೋರಿಗೆ ನಿಗದಿಗೊಳಿಸಿದ ಏಳು ದಿವಸಗಳ ಮೊದಲು ಮಾಣಿ ಗುತ್ತಿನ ಮನೆಯಲ್ಲಿ ಗೊನೆ ಮುಹೂರ್ತ ನಡೆಯುತ್ತದೆ.ದೈವದ ಅಪ್ಪಣೆ ಪ್ರಕಾರ ಈ ನೇಮಕ್ಕೆ ಗ್ರಾಮಸ್ತರ ಮನೆ – ಮನೆಗೆ ಹೋಗಿ ಆಮಂತ್ರಣ ಕೊರಗಜ್ಜ ದೈವ ನೀಡುತ್ತದೆ. ಈ ದೈವಕ್ಕೆ ಗ್ರಾಮದ ಪ್ರತೀ ಮನೆಯ ಜನರು ಬರಮಾಡಿ ತುಳು ನಾಡಿನ ಸಾರ್ವತ್ರಿಕ ಅಕ್ಕಿಅಥವಾ ಭತ್ತ ,ತೆಂಗಿನ ಕಾಯಿ,ಯಥಾನುಶಕ್ತಿ ಕಾಣಿಕೆ ಮಾನಾದಿಗೆ , ನೀಡಿ ಆಶೀರ್ವಾದ ಪಡೆಯುತ್ತಾರೆ.ಕೆಲವು ಮಂದಿ ಅಗೆಲ್ ಬಡಿಸುವ ಮೂಲಕ ಕೊರಗಜ್ಜನ ಸಂತೃಪ್ತಿ ಪಡಿಸಿ ಧನ್ಯತಾ ಭಾವ ಹೊಂದುತ್ತಾರೆ. (Follow Beauty of Tulunad facebook page)

ಕಂಬಳಕೋರಿ ಎಂದರೆ ಗ್ರಾಮದ ಪಾವಿತ್ರ್ಯತೆ ಹೊಂದಿರುವ ಕಂಬಳ ಗದ್ದೆಯ ಕೋರುವುದು / ಉಳುಮೆ ಮಾಡುವುದು ಆಗಿದೆ. ಮಾಣಿ ಕಂಬಳ ಗದ್ದೆಗೆ ಸೂತಕ ,ಮೈಲಿಗೆ ಇದ್ದವರು ಹೋಗುವಂತಿಲ್ಲ.(ಬಾಕಿಮಾರು ಗದ್ದೆಗೂ ಈ ನಿಯಮ ಅನ್ವಯಿಸುತ್ತದೆ) ಇದು ಹಿಂದಿನ ಕಾಲದಿಂದಲೂ ನಡೆದುಕೊಂಡು ಬಂದ ಸಂಪ್ರದಾಯ- ಕಟ್ಟು ನಿಟ್ಟಿನ ನಿಯಮ. (Follow Beauty of Tulunad facebook page)

ಕಂಬಳ ಗದ್ದೆಯ ಉಳುವ ಮುಹೂರ್ತ ಕ್ಕೆ ” ಕಂಡದ ಕೋರಿ ” ಎಂದು ಕರೆಯಲಾಗುತ್ತದೆ ಇದು ಪ್ರಾಚೀನ ಕಾಲದಿಂದಲೂ ನಡೆದುಕೊಂಡು ಬಂದ ಧಾರ್ಮಿಕ ಆಚರಣೆ. ಇದರ ಮುಂಚಿನ ದಿವಸ ಕಂಬಳ ಗದ್ದೆಯ ಸಿಂಗರಿಸಲಾಗುತ್ತದೆ. ನಿಗದಿ ಪಡಿಸಿದ ಗ್ರಾಮದ ಜನರು ಕಂಬಳ ಗದ್ದೆಯ ಬದುವಿನ ಸುತ್ತ ಜೇಡಿಮಣ್ಣಿನಲ್ಲಿ ಸಿಂಗರಿಸುತ್ತಾರೆ ಮತ್ತು ಕಂಬಳ ಕೋರಿ ಗೆ ಪೂರ್ವ ಸಿದ್ದತೆ ನಡೆಸುತ್ತಾರೆ. ಕಂಡದ ಕೋರಿ ಯ ದಿನ ಬೆಳಿಗ್ಗೆ ಕಂಬಳ ಗದ್ದೆಯ ಬದಿಯಲ್ಲಿ ಇರುವ ನಾಗ ,ನಾಗ ಬ್ರಹ್ಮ ರಿಗೆ ತಂಬಿಲ ಸೇವೆ ನಡೆದು ಬಳಿಕ ಪ್ರಾಚೀನ ಕಾಲದ ಸಂಪ್ರದಾಯ ದಂತೆ ನಾಗಬ್ರಹ್ಮ ಹಾಗೂ ಉರವನಿಗೆ( ಎರುಬಂಟ) ನೇಮ ನಡೆದು ಸಾಂಕೇತಿಕವಾಗಿ ಉಳುಮೆ ಮಾಡಲಾಗುತ್ತದೆ.( ಹಿಂದಿನ ಕಾಲದಲ್ಲಿ ಮಾಣಿ ಗ್ರಾಮದ ಬೇರೆಬೇರೆ ಕಡೆಯಿಂದ ಉಳುಮೆ ಗೆ ಎತ್ತು – ಕೋಣಗಳ ಜೊತೆ ಬರುತ್ತಿದ್ದ ವು.ಎಂದು ಊರಿನ ಹಿರಿಯರು ಹೇಳುತ್ತಾರೆ. ಇಂದು ಕಾಲ ಬದಲಾಗಿದೆ .ಎಲ್ಲವೂ ಕಟ್ಟು ಕಟ್ಟಳೆ ಆಚರಣೆ ಆಗಿ ಉಳಿದಿದೆ.) (Follow Beauty of Tulunad facebook page)

ಈ ಸಮಯದಲ್ಲಿ ಡೋಲು ಬಾರಿಸುತ್ತಾ,ಗುತ್ತಿನ ಮನೆಯವರು,ಊರಿನ ಪ್ರಮುಖರು, ಗ್ರಾಮಸ್ತರು ಕಂಬಳ ಗದ್ದೆಯ ಬದಿ ಬರುತ್ತಾರೆ. ವಿಜೃಂಭಣೆಯಿಂದ ಪೂಕರೆ ನೆಟ್ಟು,ವಿಶೇಷ ಸಂಪ್ರದಾಯ ನಡೆದು ಎಲ್ಲರೂ ಅನ್ನಪ್ರಸಾದ ದ ಸಹಭೋಜನ ನಡೆಸುತ್ತಾರೆ. ಕಂಬಳಕೋರಿ ಎಂದರೆ ಗ್ರಾಮ ದೈವಕ್ಕೆ ಪುದ್ದಾರ್ (ಹೊಸ -ಅನ್ನ) ಇದ್ದಂತೆ. ಇದನ್ನು ಸ್ಮರಣೀಯ ವಾಗಿ ಗ್ರಾಮಸ್ತರು ಒಟ್ಟಾಗಿ ಸಹ ಭೋಜನ ನಡೆಸುವುದು ವಾಡಿಕೆ.ಹಿಂದಿನ ಕಾಲದಲ್ಲಿ ಕಂಬಳ ಕೋರಿ ದಿವಸ ಸಣ್ಣ ಪುಟ್ಟ ಸಂತೆ ವ್ಯಾಪಾರ ಕೂಡ ಇತ್ತೆಂದು ಇಂದಿಗೂ ಊರಿನ ಹಳೆಯ ಕಾಲದ ಹಿರಿಯ ವ್ಯಕ್ತಿಗಳು ಸವಿ – ಸವಿ ನೆನಪಾಗಿ ನೆನಪಿಸಿಕೊಳ್ಳುತ್ತಾರೆ. ಕಂಬಳ ಕೋರಿ ದಿವಸ ರಾತ್ರಿ ಮಾಣಿಗುತ್ತಿನಲ್ಲಿ ಅರಸು ಶ್ರೀ ಗುಡ್ಡೆಚಾಮುಂಡಿ ಪ್ರಧಾನಿ ಶ್ರೀ ಪಂಜುರ್ಲಿ ಮತ್ತು ಬಂಟೆಡಿ ಶ್ರೀ ಮಲೆಕೊರತಿ ದೈವಗಳಿಗೆ ವರ್ಷದ ಮೊದಲ ನೇಮೋತ್ಸವ ಜರುಗಿ ಕಂಬಳ ಕೋರಿ ಆಚರಣೆಗೆ ಪರಿಸಮಾಪ್ತಿ ಆಗುತ್ತದೆ. (Follow Beauty of Tulunad facebook page)

ಮಾರನೇ ದಿನ ಒಂದು ಸಾವಿರದ ಒಂದು ದೈವ ಗಣಗಳಿಗೆ ಕಟ್ಟುಕಟ್ಟಳೆ ಸೇವೆ ನಡೆದು ಕೊನೆಯಲ್ಲಿ ಕೊರಗಜ್ಜನಿಗೆ ಸೇವೆ ನಡೆಯುದು ವಾಡಿಕೆ ಹೀಗೆ ಕಂಬಳಕೋರಿ ಆಚರಣೆಗೆ ಮಾಣಿಯಲ್ಲಿ ಮಹತ್ವ ಇದೆ. ಕಂಬಳ ಕೋರಿ ಗೆ ಗೊನೆ ಮುಹೂರ್ತ ನಡೆದ ಬಳಿಕ ಕಂಬಳಕೋರಿ ನೇಮ ಆಗುವ ವರೆಗೆ ಗ್ರಾಮದಲ್ಲಿ ಶುಭ ಸಮಾರಂಭ, ಸಭೆ ಮುಂತಾದುಗಳು ನಡೆಯುವಂತಿಲ್ಲ. (Follow Beauty of Tulunad facebook page)

Courtesy : Beauty of Tulunad | Photo Credits : Shravan Poojari Agrabail | Beauty of Tulunad | Article Credits : Bantwal News

Tuesday, 4 December 2018

ಅಗೋಳಿ ಮಂಜಣ್ಣ’ ಎಂಬುವನೊಬ್ಬನಿದ್ದ...

‘ಅಗೋಳಿ ಮಂಜಣ್ಣ’ ಎಂಬುವನೊಬ್ಬನಿದ್ದ...
ಶ್ರೀವತ್ಸ ಜೋಶಿ:

ಆಗೊಳಿ ‘ಮಂಜಣ್ಣ’ನ ಕುರಿತಾಗಿ ನಿಮಗೆ ಹೇಳಬೇಕೆಂದೆನಿಸಿತು. ಈತನ ಕಥೆಯೆಂದರೆ ತುಳುನಾಡಿನ ‘ಜಗ ಜಟ್ಟಿ’ಯ, ಗಟ್ಟಿ ಮುಟ್ಟಿನ ಭೀಮ ಕಾಯದ ಬಕಾಸುರ ಬಾಯಿಯ ದಢೂತಿ ವ್ಯಕ್ತಿಯಾಬ್ಬನ ಕಣಿ. ತುಳುನಾಡ ಸಿರಿಯ ಮೌಕ್ತಿಕ ಹಾರದಲ್ಲೊಂದು ಹೊಳೆಯುವ ಮಣಿ.

ಸಾಹಿತ್ಯ ಭಂಡಾರ ಅಷ್ಟಕ್ಕಷ್ಟೆ - ಹೀಗಿದ್ದರೂ ತುಳು ಭಾಷೆಯಲ್ಲಿ ಜನಪದ ಕಥೆ ಕವನ ನುಡಿಗಟ್ಟುಗಳ ಅದ್ಭುತ ಕಣಜವೇ ಇದೆ. ತುಳು ಸಾಹಿತ್ಯ/ಜನಪದ ಅಧ್ಯಯನದಲ್ಲಿ ಪಾರಂಗತರಾದ ಪ್ರೊ।ಬಿ.ಎ ವಿವೇಕ ರೈಯವರು ಹೇಳುವಂತೆ ತುಳುನಾಡಿನಲ್ಲಿ ಹಿಂದಿನಿಂದಲೂ ನಮ್ಮ ಹಿರೀಕರು ಹೇಳಿಕೊಂಡು ಬಂದಂಥ ಅಜ್ಜಿಕಥೆ, ಪಾಡ್ದನ ಕಥೆಗಳೇ ಒಂದು ಕಾಲದಲ್ಲಿ ತುಳುನಾಡಿಗರಿಗೆ ಗತಚರಿತ್ರೆಯನ್ನು ತಿಳಿಸಿದ- ಕಲಿಸಿದ ವಿದ್ಯೆಯಾಗಿದ್ದುವು. ಕೋಟಿ-ಚೆನ್ನಯ, ಸಿರಿ, ಅಬ್ಬಗ-ದಾರಗ, ದೇವು ಪೂಂಜ, ಅಗೋಳಿ ಮಂಜಣ್ಣ, ಭೂತಾಳ ಪಾಂಡ್ಯ ಮೊದಲಾದ ಚಾರಿತ್ರಿಕ ವೀರ ವೀರೆಯರ ಕತೆಗಳನ್ನು ತುಳುವರೆಲ್ಲ ಬಾಲ್ಯದಲ್ಲಿ ಕೇಳಿಯೇ ಇರುತ್ತಾರೆ. ಇಂದಿನಂತೆ ಸೂಪರ್‌ಮ್ಯಾನ್‌, ಬ್ಯಾಟ್‌ಮಾನ್‌, ಫಾಂಟಮ್‌ ಮೊದಲಾದ ಕಾಮಿಕ್‌ ಹೀರೋಗಳ ಬಗ್ಗೆ ಕೇಳಿಯೂ ಗೊತ್ತಿರದಿದ್ದ ದಿನಗಳವು. ಅಜ್ಜ ಅಜ್ಜಿ ಹೇಳುವ ಕಥೆಗಳಲ್ಲೇ ತಮಾಷೆ, ಕುಟಿಲತೆ, ನೀತಿ, ಸಾಹಸ, ಹೊಟ್ಟೆ ಹುಣ್ಣಾಗಿಸುವಷ್ಟು ನಗು ಎಲ್ಲವೂ ಸೇರಿರುತ್ತಿತ್ತು. ಆ ಕಥೆಗಳಲ್ಲಿ ಕನಸು ಕಟ್ಟುವ ರಸವಿತ್ತು; ಕನಸನ್ನು ನನಸಾಗಿಸುವ ಛಲ ಮೂಡಿಸುವ ಕಸುವಿತ್ತು. ಅಂತಹ ಒಂದು ಕಥೆಯ ನಾಯಕ ‘ಅಗೋಳಿ ಮಂಜಣ್ಣ’ನ ಕುರಿತು ಒಂದೆರಡು ಸಾಲನ್ನಾದರೂ ನೀವು ಓದಬೇಕು ಅನ್ನುವ ದೃಷ್ಟಿಯಿಂದ ಈ ವಾರದ ವಿಷಯವನ್ನು ಆಯ್ದುಕೊಂಡಿದ್ದೇನೆ.

ಆಗಲೇ ಅಂದಂತೆ ಅಗೋಳಿ ಮಂಜಣ್ಣ ತುಳುನಾಡಿನ ಭೀಮನೆಂದು ಪ್ರಸಿದ್ಧನಾದ ಐತಿಹಾಸಿಕ ಪುರುಷ. ಅಪ್ರತಿಮ ಶಕ್ತಿ ಸಾಹಸಗಳಿಗೆ ಹೆಸರಾದ ವ್ಯಕ್ತಿ. ಅದ್ಭುತ ಜೀರ್ಣಶಕ್ತಿಯುಳ್ಳ ತಿನಿಸಿಗ. ‘ಅಗೋಳಿ’ ಎಂಬ ತುಳು ಶಬ್ದಕ್ಕೆ ಅರ್ಥ ಗುಡಾಣ, ಹಂಡೆ ಅಥವಾ ಅಂತಹದೇ ಭಾರಿ ಗಾತ್ರದ ಪಾತ್ರೆ ಎಂದು. ಆ ಪಾತ್ರೆಯಲ್ಲಿ ಊಟ ಮಾಡುವವನು ಅಗೋಳಿ ಮಂಜಣ್ಣ. ಮಂಗಳೂರು ಆಕಾಶವಾಣಿಯ ಕೃಷಿರಂಗ ಕಾರ್ಯಕ್ರಮದಲ್ಲಿ ಅಗೋಳಿ ಮಂಜಣ್ಣನ ಕಥಾನಕವನ್ನು ತುಳು-ಕಬಿತೆ ರೂಪದಲ್ಲಿ ಅಪರೂಪಕ್ಕೊಮ್ಮೆ ಪ್ರಸಾರಮಾಡುತ್ತಾರೆ. ಅದರಲ್ಲಿ ಮಂಜಣ್ಣನ ಅಪೆಟೈಟ್‌ ಹೇಗಿತ್ತು ಎಂಬ ವರ್ಣನೆಯ ಸಾಲುಗಳನ್ನು ನೋಡಿ:

ಬಜಿಲ್‌ ಒಂಜಿ ಕಳಾಸೆ ಆಂಡಾಲಾ ಒರೊರೊ ಅರಾ ಅರಾ ಆಪುಂಡ್‌
ಗೋಂಟ್‌ ತಾರಾಯಿ ಇರ್ವತ್ತೈನ್‌ಲಾ ಬಾಯಿಡೆ ಗಾಣ ಪಾಡುಂಡ್‌...

ಅವಲಕ್ಕಿ ಒಂದು ಕಳಸಿಗೆಯಷ್ಟಿದ್ದರೂ (1 ಕಳಸಿಗೆ ಅಂದರೆ 14 ಸೇರು; 3 ಕಳಸಿಗೆ ಅಂದರೆ 1 ಮುಡಿ) ಕೆಲವೊಮ್ಮೆ ಕಡಿಮೆಯೇ ಆಗುತ್ತದೆ. ಒಣತೆಂಗಿನಕಾಯಿ ಇಪ್ಪತ್ತೈದು ಇದ್ದರೂ ಬಾಯಿಯಲ್ಲೇ ಗಾಣಹಾಕುತ್ತಾನೆ.

ಸುಮಾರು ನಾಲ್ಕೈದು ತಲೆಮಾರುಗಳ ಹಿಂದೆ ಮಂಗಳೂರಿನ (ತುಳುವಿನಲ್ಲಿ ‘ಕುಡ್ಲ’ ಎನ್ನುವುದು) ಹತ್ತಿರದ ತೊರ್ತಲ್ತ್‌ ಎಂಬ ಹೆಸರಿನ ಗ್ರಾಮದ ಕಟ್ಲ ಎನ್ನುವಲ್ಲಿ ನಾರಾಯಣ ಶೆಟ್ಟಿ ಮತ್ತು ದುಗ್ಗು ದಂಪತಿಯ ಮಗನಾಗಿ ಹುಟ್ಟಿದವ ಮಂಜಣ್ಣ. ಸಂತಾನಹೀನ ಶೆಟ್ಟಿ ದಂಪತಿ ಬಪ್ಪನಾಡಿನ ದುರ್ಗಾಪರಮೇಶ್ವರಿಗೆ ಹರಕೆ ಸಲ್ಲಿಸಿದ ಬಳಿಕವೇ ಮಂಜಣ್ಣ ಹುಟ್ಟಿದ್ದು. ಹಾಗಾಗಿ ತಂದೆ ತಾಯಿಯಂತೆ ಆತನೂ ದುರ್ಗೆಯ ಭಕ್ತ. ಮಂಜಣ್ಣನ ಸೋದರಮಾವ, ನೆರೆಯಗ್ರಾಮವಾದ ‘ತೆಲಾರ್‌ ಗುತ್ತು’ ಎನ್ನುವಲ್ಲಿನ ಬಗ್ಗಣ್ಣ ಅಡ್ಯಂತಾಯ. ಮಂಜಣ್ಣ ಹುಟ್ಟಿದ್ದು ಅಲ್ಲೇ. ಅದೂ ಅಲ್ಲದೇ ‘ಅಳಿಯ ಸಂತಾನ’ ರೂಢಿಯಲ್ಲಿದ್ದುದರಿಂದ ಮತ್ತು ಬಗ್ಗಣ್ಣ ಅಡ್ಯಂತಾಯನಿಗೆ ಸೈನ್ಯಕ್ಕೆ ಸೇರಲು ಬುಲಾವ್‌ ಬಂದಿದ್ದರಿಂದ ಇಡೀ ‘ತೆಲಾರ್‌ ಗುತ್ತು’ ಪ್ರದೇಶಕ್ಕೆ ಮಂಜಣ್ಣನನ್ನೇ ಅಧಿಪತಿಯನ್ನಾಗಿ ಮಾಡಲಾಗಿತ್ತು.

ಓ... ತೆಲಾರ ಗುತ್ತ ಮಂಜಣ್ಣಾಯ್ಕೆ ಪನ್ಪಿನಾಯೆ। ಆಯೇ ಬಾರಿ ಬಿರ್ದ್‌ ತಂಕ ದರ್ಪು ಮಲ್ದಿನಾಯೇ ।।
ಅಟ್ಟೆ ಮುಟ್ಟೆ ಪೊಲಿಪುನಂಚೀ ಲಟ್ಟೆದಾಯೆ । ಆಯೇ ಕೊಟ್ಟೆದಾಂಕರದ ತಿಗಲೇ ನುರ್ದಿನಾಯೇ ।।
ಕೆಂಚಿ ಮೀಸೆ ಕುಪುಲು ಕಣ್ಣ್‌ ಮರದಿನಾಯೇ। ಆಯೇ ಪುಂಚೊಡಿತ್ತಿ ಉಚ್ಚುಲೇನ್‌ ಪುರುಂಚಿನಾಯೇ ।।
ಕೊದಂಟಿದಾಂತೇ ಅರಿತ್ತ ಮುಡಿಲಾ ಕಟ್‌ದಿನಾಯೇ । ಆಯೇ ಕೈಟ್‌ ಗುದುದೂ ಕೊಜಂಟಿ ತಾರಯಿ ಮಲ್ದಿನಾಯೇ ।।

ಮಂಜಣ್ಣನ ಪರಾಕ್ರಮವನ್ನು ಸಾರುವ ಕಥಾನಕದ ಸಾಲುಗಳಿವು. ತೆಲಾರಗುತ್ತುವಿನ ಬಿರುದಾನ್ವಿತ, ಸಮಕಾಲೀನ ಅಹಂಕಾರಿ ಜಟ್ಟಿಗಳಿಗೆಲ್ಲ ಮಣ್ಣುಮುಕ್ಕಿಸಿದ, ಹುತ್ತಕ್ಕೇ ಕೈ ಹಾಕಿ ಹಾವುಗಳನ್ನೆಲ್ಲ ತಿರುಚಿಹಾಕುವ ಸಾಹಸಿಗ, ಯಾವುದೇ ಕೈಕರಣದ ನೆರವಿಲ್ಲದೇ ಅಕ್ಕಿ ಮುಡಿಯನ್ನು ಕಟ್ಟಬಲ್ಲವ (‘ಕೊದಾಂಟಿ’ ಎಂದರೆ ಅಕ್ಕಿಮುಡಿಯನ್ನು ಕಟ್ಟುವಾಗ ಬೈಹುಲ್ಲಿನಲ್ಲಿ ಅಕ್ಕಿ ಒತ್ತಟ್ಟಾಗಿಸಲು ಕೈಯಲ್ಲಿ ಹಿಡಿದು ಬಡಿಯುವ ಮರದ ದಪ್ಪವಾಗಿರುವ ಕೋಲು), ಕೈಯಲ್ಲಿ ಗುದ್ದಿಯೇ ತೆಂಗಿನಕಾಯಿಯನ್ನೊಡೆದು ತಿರುಳನ್ನೆಲ್ಲ ನುಂಗುವವ... ಹೀಗೆ ಸಾಗುತ್ತದೆ ಮಂಜಣ್ಣನ ವರ್ಣನೆ.

ಎರ್ಮಾಳ್‌ ಊರಿನ ಜಾತ್ರೆಯಲ್ಲಿ ಬಲಪ್ರದರ್ಶನ, ದೇವಸ್ಥಾನದ ಪ್ರಾಂಗಣದಲ್ಲಿದ್ದ ಬಲಿಗಲ್ಲನ್ನು ಕಿತ್ತೆಬ್ಬಿಸಿ ಒಬ್ಬನೇ ಅದನ್ನು ಹೊತ್ತುತಂದು ಬಪ್ಪನಾಡು ದುರ್ಗಾಪರಮೇಶ್ವರಿಯ ಪದತಲಕ್ಕೆ ತಂದು ತಾಯಿಯ ಹರಕೆಯನ್ನು ಕೈಗೂಡಿಸಿದ್ದು, ಅರಸು ಕಂಬಳ ನಡೆಸುತ್ತೇವೆಂದು ಹೊರಟ ಮುಲ್ಕಿಯ ಸಾಮಂತ ಅರಸ ಕಳಿಸಿದ ಯುವಕರ ಜಂಭ ಮುರಿದದ್ದು, ಅಷ್ಟು ಯುವಕರು ಒಟ್ಟಿಗೇ ಸೇರಿದರೂ ಕದಲಿಸಲೂ ಆಗದ ಕಾಡುಸೊಪ್ಪಿನ ಕಟ್ಟನ್ನು ಒಬ್ಬನೇ ಎತ್ತಿ ಸಾಗಿಸಿದ್ದು (ಆಗೆಲ್ಲ ದನಕರುಗಳನ್ನು ಕಟ್ಟುವ ಹಟ್ಟಿಗೆ ದಿನಾಲೂ ಸೊಪ್ಪು ತಂದು ಹಾಕುವುದು, ಇದರಿಂದ ಸಾವಯವ ಗೊಬ್ಬರ ಮಾಡುವ ಕ್ರಮ), ಹುಲ್ಲಿನ ಕಟ್ಟಿನಲ್ಲೇ ಹಂದಿಮರಿಯನ್ನೂ ಅಡಗಿಸಿಟ್ಟು ತಂದು ತನ್ನ ಸೋದರತ್ತೆಯ ಬಳಿ ರೊಟ್ಟಿ-ಹಂದಿಮಾಂಸದಡಿಗೆ ಮಾಡಿಕೊಡೆಂದು ಹೇಳಿದ್ದು, ಒಲ್ಲೆನೆಂದರೆ ಅತ್ತೆಗೇ ಬುದ್ಧಿಕಲಿಸುವ ಉಪಾಯ ಹೂಡಿದ್ದು, ತೆಂಗಿನಮರಗಳನ್ನು ಕೈಗಳಿಂದ ಅಲುಗಾಡಿಸಿಯೇ ಎಳೆನೀರು ಉದುರುವಂತೆ ಮಾಡಿ ಆನಂದಿಸಿದ್ದು, ಬೈಹುಲ್ಲನ್ನು ಹೊತ್ತುಕೊಂಡು ಬರಲು ಮನೆಯಾಂದಕ್ಕೆ ಹೋದಾಗ ಅವರು ಊಟ ಮಾಡುತ್ತೀಯಾ ಎಂದು ಕೇಳೇ ಇಲ್ಲವೆಂದು ಕುಪಿತನಾಗಿ ಅವರ ಮನೆಯಂಗಳದಿಂದ ಧಾನ್ಯದ ಕಣಜವನ್ನೇ ಹಿಡಿದೆತ್ತಿ ಸಾಗಿಸಿದ್ದು ... ಹೀಗೆ ಮಂಜಣ್ಣನ ಅಟಾಟೋಪಗಳು ಲೆಕ್ಕವಿಲ್ಲದಷ್ಟು.

ಇಷ್ಟಿದ್ದರೂ ಸೂಕ್ಷ್ಮವಾಗಿ ನೋಡಿದರೆ ಇದಾವುದೂ ಉಪಟಳ ಕೊಡುವುದಕ್ಕಾಗಿ ಹುಡುಗುಬುದ್ಧಿಯಿಂದ ಮಾಡಿದ್ದಲ್ಲ. ‘ಪವರ್‌ ಹೌಸ್‌’ ಆಗಿದ್ದ ಕಾಯಕ್ಕೆ ಕಾಯಕ ಬೇಕಲ್ಲ ! ಸುಡುಗಾಡಿನಂತಿದ್ದ ಊರನ್ನು ಸುಭಿಕ್ಷವಾಗಿಸಿದ್ದು ಮಂಜಣ್ಣನೇ! ಗುಡ್ಡಬೆಟ್ಟ ಕಡಿದು ಹೊಲಗದ್ದೆಗಳನ್ನಾಗಿ ಮಾಡಿ ಬೆವರು ಹರಿಸಿ ದುಡಿದು ಎಲ್ಲರ ಮನೆಗಳ ‘ಕುತ್ತಟ್ಟ’ (ಅಡಿಗೆಮನೆಯ ಅಟ್ಟ)ದಲ್ಲಿ ಅಕ್ಕಿಮುಡಿಗಳ ರಾಶಿರಾಶಿ ಪೇರಿಸಿಟ್ಟ ಜೀವ ಅವನು. ಸತ್ಯಮಾರ್ಗದಲ್ಲಿ ನಡೆದವನು. ಅನವಶ್ಯಕ ಕಾಲುಕೆರೆದು ಜಗಳವಾಡಿದವನಲ್ಲ, ಅದರೆ ಒಂದೊಮ್ಮೆ ಯಾರಾದರೂ ಕೆಣಕಿದರೆ ಅವರ ಗತಿಯೇನು ಎಂಬುದನ್ನು ಕಾಳಗದ ಮೊದಲೇ ಊಹಿಸಬಹುದಿತ್ತು!

ಅಗೋಳಿ ಮಂಜಣ್ಣ ಕಥೆನ್‌ ಕೇಣ್ಣಾಗಾ ಜೋಕುಲೊಟ್ಟಿಗೆ ನಲಿಪುವೊ
ಮಲ್ಲಾ ಜವಾಣೆರ್‌ ಮರ್ಲ್‌ ಪತ್ತ್‌ದ್‌ ಮಂಜಣ್ಣಾ ಬೆರಿಯೆ ಪಾರುವೊ...

ಮಂಜಣ್ಣನ ಕಥೆಯನ್ನು ಅಜ್ಜ-ಅಜ್ಜಿ ಹೇಳುವಾಗ ಮಕ್ಕಳೆಲ್ಲ ಸಂತೋಷದಿಂದ ಕುಣಿದರೆ ಯುವಕರು ಸ್ಫೂರ್ತಿಗೊಂಡು ಮಂಜಣ್ಣನ ಛಲ-ಬಲಗಳ ಅನುಕರಣೆಗೆ ತೊಡಗುತ್ತಾರೆ..

ಇಂತಹ ಧೀರ ಮಂಜಣ್ಣನ ಅವಸಾನ ಹೇಗಾಯ್ತು ಎಂಬ ಕುತೂಹಲವಿರಬಹುದಲ್ಲವೇ? ಮಂಜಣ್ಣನ ಪರಾಕ್ರಮವನ್ನು ನೋಡಿ ಮತ್ಸರದಿಂದ ಕುದಿಯುತ್ತಿದ್ದ ಸಮಕಾಲೀನ ಹೇಡಿ ಯುವಕರ ಗುಂಪೊಂದು ಮೋಸಮಾಡಿ ಮಂಜಣ್ಣನನ್ನು ಸುಮ್ಮನೇ ಔತಣ ಬಡಿಸುತ್ತೇವೆಂದು ಆಹ್ವಾನಿಸಿತು. ಹುಣ್ಣಿಮೆಯ ಮುಚ್ಚಂಜೆಯಲ್ಲಿ ನಿಗದಿತ ಸ್ಥಳಕ್ಕೆ ಅವನು ಬರುತ್ತಿದ್ದಾಗ ಈ ಯುವಕರು ಮರೆಯಲ್ಲಿ ನಿಂತು ಒಂದರಮೇಲೊಂದರಂತೆ ಮಂಜಣ್ಣನ ಮೇಲೆ ಬಾಣಗಳ ಸುರಿಮಳೆ ಮಾಡಿ ದಾರುಣ ಹತ್ಯೆಗೈದರು ಎಂಬ ಸಂಗತಿ ವಿಷಾದ ಮೂಡಿಸುತ್ತದೆ. ಪರಾಕ್ರಮಿಯಾಬ್ಬನಿಗೆ ಈ ರೀತಿಯ ಅವಸಾನ, ಅವನೊಬ್ಬ ಐತಿಹಾಸಿಕ ಪುರುಷನೇ ಆಗಿದ್ದರೂ ಅವನ ಮೇಲೆ ಹೆಚ್ಚಿನ ಕನಿಕರ ಮೂಡಿಸುತ್ತದೆ.

ಅಗೋಳಿ ಮಂಜಣ್ಣನ ಕುರಿತಾದ ಈ ಲೇಖನಕ್ಕೆ ಪೂರಕ ಸಾಮಗ್ರಿಯನ್ನು (ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಂಗಳೂರು ಅವರಿಂದ ಪ್ರಕಟಿತ, ಗಣೇಶ್‌ ಅಮೀನ್‌ ಸಂಕಮಾರ್‌ ಅವರ ‘ಅಗೋಳಿ ಮಂಜನೆ’ ತುಳು ಭಾಷೆಯ ಪುಸ್ತಕ) ಒದಗಿಸಿದ ನ್ಯೂಜೆರ್ಸಿಯಲ್ಲಿರುವ ದಿನೇಶ್‌ ನೆಟ್ಟಾರ್‌ (ಮೂಲತಃ ಮಂಗಳೂರಿನವರೆಂದು ಬೇರೆ ಹೇಳಬೇಕಿಲ್ಲವಷ್ಟೆ) ಅವರಿಗೂ, ತುಳು-ಕನ್ನಡ-ಇಂಗ್ಲಿಷ್‌ ನಿಘಂಟಿನಿಂದ ಅಗೋಳಿ ಮಂಜಣ್ಣನ ಬಗ್ಗೆ ವಿವರಗಳನ್ನೊದಗಿಸಿದ ಮೇರಿಲ್ಯಾಂಡ್‌ ನಿವಾಸಿ ಡಾ।ಕುಸುಮಾಧರ ಗೌಡ ಅವರಿಗೂ ವಿಶೇಷ ಕೃತಜ್ಞತೆಗಳು.
Copy post....

Thursday, 22 November 2018

ಕಾಲವಾಗುತ್ತಿದೆ ಕುತ್ತೆತ್ತೂರು ಅರಮನೆ - Beauty of Tulunad

ಕಾಲವಾಗುತ್ತಿದೆ ಕುತ್ತೆತ್ತೂರು ಅರಮನೆ - Beauty of Tulunad



ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ಅರಮನೆಗಳಲ್ಲಿ  ಒಂದಾದ ಕುತ್ತೆತ್ತೂರು ಅರಮನೆ ಕ್ಷಯವಾಗುತ್ತಿದೆ. ಉಪ್ಪರಿಗೆಯ ಅಂದರೆ ಒಂದು ಮಹಡಿಯ ಈ ಅರಮನೆಯ ಹಂಚುಗಳನ್ನು ಅರ್ಧಭಾಗದಷ್ಟು ತೆಗೆಯಲಾಗಿದೆ. ಒಂದು ಭಾಗ ಕುಸಿದಿದೆ. ಇನ್ನರ್ಧವನ್ನು ಕೆಡವಿ ಹಾಕಲಾಗಿದೆ.

ಮಂಗಳೂರಿನಿಂದ ಸುರತ್ಕಲ್ಲಿಗೆ ಸಾಗುವ ಹೆದ್ದಾರಿಯಲ್ಲಿ ಎಡಕ್ಕೆ ತಿರುಗಿ ಮುಂದುವರೆದರೆ ಕುತ್ತೆತ್ತೂರು ಎಂಬಲ್ಲಿ ಹಸಿರಿನ ನೆಮ್ಮದಿ ಹೊದ್ದುಕೊಂಡು ಮಲಗಿದ ಪ್ರದೇಶದಲ್ಲಿ ಈ ಅರಮನೆ ಇದೆ. ಎದುರು ಭಾಗದಲ್ಲಿ ಕೆರೆಯೊಂದಿದೆ. ಅದರ ಪಕ್ಕದಲ್ಲಿ ಇನ್ನೊಂದು ಬಾವಿಯಂತಹ ರಚನೆ ಇದೆ. ಅದರ ಮಗ್ಗುಲಲ್ಲೇ ಶಿಲಾಶಾಸನವಿದೆ.

ಅರಮನೆಯ ಚಾವಡಿ ವಿಶಾಲವಾಗಿದೆ. ಬೃಹತ್ ಕಂಭಗಳು ಇದರ ಉಪ್ಪರಿಗೆಯನ್ನು ಆಧರಿಸಿ ಹಿಡಿದಿವೆ. ಗಟ್ಟಿ ಮುಟ್ಟಾದ ತೊಲೆಗಳು ಅರಮನೆಗೆ ಸುರಕ್ಷೆಯನ್ನು ಒದಗಿಸಿವೆ. ಕಂಭಗಳು ಅತ್ಯಂತ ನಾಜೂಕಿನ ಕುಸುರಿಕೆತ್ತನೆಯನ್ನು ಹೊಂದಿವೆ. ಇಲ್ಲಿ ನ್ಯಾಯ ತೀರ್ಮಾನಗಳಾಗುತ್ತಿದ್ದವು. ನ್ಯಾಯ ತೀರ್ಮಾನ ಮಾಡಲು ಕುಳಿತುಕೊಳ್ಳುವ ಸ್ಥಳದಲ್ಲಿ ಯಾವುದೇ ಕೆತ್ತನೆಗಳಿಲ್ಲದ ಕಂಬವೊಂದಿದೆ. ಅದರ ಅಡಿಯಲ್ಲಿ  ಮನೆಯ ಮಕ್ಕಳು ಕೂಡಾ ಕುಳಿತುಕೊಳ್ಳುವಂತಿರಲಿಲ್ಲ ಎನ್ನುವುದನ್ನು ಈಗ ವೃದ್ದಾಪ್ಯದಂಚಿನಲ್ಲಿರುವ ತಲೆಮಾರು ನೆನಪಿಸಿಕೊಳ್ಳುತ್ತದೆ.

ಮೂಲತಹ ಈ ಅರಮನೆ ಜೈನ ಮನೆತನಕ್ಕೆ ಸೇರಿದುದಾಗಿತ್ತು. ಕರ್ಣ  ಪರಂಪರೆಯ ಮೂಲಕ ಜನ ಮಾನಸದಲ್ಲಿ ಉಳಿದಿರುವ ಸಂಗತಿ. ಅರಸಿ ಜೈನ ಮಹಿಳೆಯೊಬ್ಬರು (ಪೊನ್ನು ಕುಂದಾಡ್ದಿ - ಈ ಬಗ್ಗೆ ಕೆ.ವಿ.ರಮೇಶ್ ಅವರ ತುಳುನಾಡಿನ ಪ್ರಾಚೀನ ಇತಿಹಾಸ ಪುಸ್ತಕದಲ್ಲಿ ಉಲ್ಲೇಖವಿದೆ) ಈ ಪರಿಸರದಲ್ಲಿ ಆಳ್ವಿಕೆ ಮಾಡಿದ ಬಗ್ಗೆ ಪಾಡ್ದನಗಳಲ್ಲಿ ತಿಳಿದು ಬರುತ್ತದೆ. ಈಕೆ ಮಾಯವಾದ ಅಂದರೆ ಸಮಾಧಿ ಸ್ಥಳ ಕುತ್ತೆತ್ತೂರಿನಲ್ಲಿ ಇದೆ. ಆಕ್ರಮಣದ ಸಂಧರ್ಭದಲ್ಲಿ ಜೈನರು ಅರಮನೆ ತೊರೆದು ಹೋಗುವಾಗ ಎದುರಿರುವ ಸಣ್ಣ ಕೆರೆಯಲ್ಲಿ ತಮ್ಮ ಅಮೂಲ್ಯ ಸೊತ್ತುಗಳನ್ನು ಹಾಕಿ ಊರುಬಿಟ್ಟು ಹೋದರು ಎನ್ನಲಾಗುತ್ತಿದೆ. ಸ್ಮರಣ ಪದ್ದತಿಯ ಈ ಇತಿಹಾಸವನ್ನು ದಾಖಲೆಗಳಿಲ್ಲ ಎಂಬ ಕಾರಣಕ್ಕೆ ತೀರಾ ತಳ್ಳಿ ಹಾಕುವಂತಿಲ್ಲ. ಪ್ರಖ್ಯಾತ ಇತಿಹಾಸಕಾರ ಡಾ. ಕೆ.ವಿ. ರಮೇಶ್ ಕೂಡಾ ಕರ್ಣ ಪರಂಪರೆಯಲ್ಲಿ ವಿಶ್ವಾಸಾರ್ಹ ಅಂಶಗಳಿವೆ ಎನ್ನುವುದನ್ನು ಒಪ್ಪಿಕೊಳ್ಳುತ್ತಾರೆ.

ಸ್ವಾತಂತ್ರ್ಯ ಪೂರ್ವದಲ್ಲಿ ಪ್ರಕಟವಾದ 1923 ಎಂ. ಗಣಪತಿ ರಾವ್ ಐಗಳ್ ಅವರ ’ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಚೀನ ಇತಿಹಾಸ “ ಕೃತಿಯಲ್ಲಿ “ಮಂಗಳೂರು ತಾಲೂಕಿನ ಬಲ್ಲಾಳರು” ಶೀರ್ಷಿಕೆಯಲ್ಲಿ ಕುತ್ತೆತ್ತೂರು ಮನೆತನದ ಬಗ್ಗೆ ವಿವರಗಳಿವೆ. ಕುತ್ತೆತ್ತೂರು, ಇಡ್ಯ, ಸುರತ್ಕಲ್ಲು, ಸಸಿಹಿತ್ಲು, ಚೇಳಾರು, ಸುರೆಯ, ದೇಲಂತಬೆಟ್ಟು , ಮಧ್ಯ ಗ್ರಾಮಗಳನ್ನು ಒಳಗೊಂಡ ಮೂರು ನಾಡುಗಳನ್ನು ಆಳಿಕೊಂಡಿದ್ದರು ಎಂಬ ಅಂಶ ಅದರಲ್ಲಿ ದಾಖಲಾಗಿದೆ. ಕುತ್ತೆತ್ತೂರಿನಲ್ಲಿ ಇವರ ಬೀಡು ಇದೆ. ಸುರತ್ಕಲ್ಲಿನ ಸದಾಶಿವ ದೇವಸ್ಥಾನವು ಸೀಮೆ ದೇವಸ್ಥಾನವಾಗಿದೆ. ಈ ಮನೆತನಕ್ಕೆ ಕಿನ್ನರಿ ಅರಸು ಮನೆತನ ಎಂಬ ಹೆಸರೂ ಇದೆ. ಅಳಿಯ ಕಟ್ಟನ್ನು ಇವರು ಪಾಲಿಸುತ್ತಿದ್ದರು.   ಮನೆಯ  ಒಳಭಾಗದಲ್ಲಿರುವ ಕಿಟಕಿಯ ಮೇಲೆ ನವಿಲಿನ ಚಿತ್ರಗಳಿವೆ. ಈ ವಿಶಾಲ ಮನೆಯಲ್ಲಿ ಬೆಳಕಿನ ಕೊರತೆ ಬಾರದಂತೆ ಮೇಲ್ಭಾಗದಲ್ಲಿ ತೆರೆದ ಅವಕಾಶವಿದೆ. ಇದರಿಂದ ಮಳೆಯ ನೀರು ಮನೆಯೊಳಗೆ ಬರುತ್ತಿತ್ತಾದರೂ ಬೆಳಕಿನ ಕೊರತೆ ಪರಿಹಾರವಾಗುವಂತೆ ರಚಿಸಲಾಗಿದೆ. ಅರಮನೆಯ ಪಟ್ಟದ ಕುರ್ಚಿ ಈಗ  ಬಾಲಾಲಯದಲ್ಲಿದೆ. ಅದರ ಮೇಲೂ ಕೆತ್ತನೆಗಳಿವೆ.

ಇತಿಹಾಸವೆಂದರೆ ಅದು ಭೂತಕಾಲ ಮತ್ತು ವರ್ತಮಾನಕಾಲದ ನಡುವಿನ ಸಂಭಾಷಣೆ. ಇದಕ್ಕೆ ಅವಕಾಶ ಮಾಡಿಕೊಡುವಂತಹ ಆಕರಗಳಲಿ ಅರಮನೆಗಳೂ ಒಂದು. ಕುತ್ತೆತ್ತೂರು ಅರಮನೆ ತುಳುನಾಡನ್ನು ಆಳಿದ ಅರಸುಮನೆತನಕ್ಕೆ ಸಂಬಂಧಿಸಿದ ಭೌತಿಕ  ಕೊಂಡಿ. ಹಿಂದೊಮ್ಮೆ ಇದಕ್ಕೆ ಬೆಂಕಿ ಬಿದ್ದಾಗ ಅದನ್ನು ಪುನರ್ನಿರ್ಮಿಸಲಾಗಿತ್ತು. ಅದಕ್ಕೆ ಹೊದಿಸಿದ ಹಂಚುಗಳ ಮೇಲೆ ತಯಾರಿಕೆ ಕಾಲವಾದ ೧೯೧೮ ಇಸವಿಯನ್ನು ಮುದ್ರಿಸಲಾಗಿದೆ. ಶತಮಾನಗಳನ್ನು ಕಂಡ ಈ ಅರಮನೆ ಇನ್ನು ಕೆಲವೇ ಕಾಲದಲ್ಲಿ ಕಾಲಗರ್ಭಕ್ಕೆ ಸೇರಿ  ಕಣ್ಮರೆಯಾಗುವ ಹಾದಿಯಲ್ಲಿದೆ. (Follow Beauty of Tulunad facebook page)

Wednesday, 21 November 2018

ತುಳು ಪಾತೆರೊ: ತುಳು ಭಾ‍ಷಾ ಶಾಸ್ತ್ರ ಬೊಕ ವ್ಯಾಕರಣ

ತುಳು ಪಾತೆರೊ: ತುಳು ಭಾ‍ಷಾ ಶಾಸ್ತ್ರ ಬೊಕ ವ್ಯಾಕರಣ

ಬುಧಾನಂದ ಶಿವಳ್ಳಿ ( ೧೯೨೩ - ೧೯೮೨  ) ಅರೆನ "ತುಳು ಪಾತೆರೊ: ತುಳು ಭಾ‍ಷಾ ಶಾಸ್ತ್ರ ಬೊಕ ವ್ಯಾಕರಣ"
ಮೂಲ ಪುಸ್ತಕದ ಪೂರ್ಣ ಪಾಠ ಈ ಲಚರಿ (ಬ್ಲಾಗ್) ಡ್  ದುಂಬುದ ಪುಟೊಕುಲೆಡ್  ಪ್ರಕಟವಾಪುಂಡು. ಒಂಜೊಂಜಿ ಅಂಕಣಲೆಡ್ ಕ್ರಮವಾದ್ ಒಂಜೊಂಜಿ  ಪ್ರಕರಣೊಲೆನ್ ಕೊರ್ಪುಂಡು.
ತುಳು  ಪಾತೆರೊ ಪುಸ್ತಕ
ವಿಕಿ(ತುಳು) ಪುಟ.   ಸಂಕ್ಷಿಪ್ತವಾಯಿನ  ಕೃತಿ  ಪರಿಚಯೊನು ಈ ವಿಕಿ ಪುಟೊಟುಲಾ ಓದೋಲಿ.(ನೀಲಿಡ್ ಅಡಿಗೆರೆ ಪಾಡ್ದಿನ "ತುಳು ಪಾತೆರೊ ಪುಸ್ತಕ" ಶಬ್ಧೊನು ಕ್ಲಿಕ್ ಮಲ್ಪುಲೆ).
ತುಳುಪಾತೆರೊ ಪುಸ್ತಕೊಡು ಮೂಜಿ ಭಾಗೊಲು ಉಂಡು:

ಭಾಗ ೧: ಭಾಷಾ ಶಾಸ್ತ್ರ
ಭಾಗ ೨: ತುಳು ವ್ಯಾಕರಣ
ಭಾಗ ೩: ಅನುಬಂಧಲು.

ಭಾಗ ಒಂಜಿ -ಭಾಷಾಶಾಸ್ತ್ರ
ಪುಸ್ತಕದ  ಮುದೆಲ್ದ ಭಾಗೊಡು ಉಪ್ಪುನ ಅಧ್ಯಾಯೊಲು ಇಂಚ ಉಂಡು:
ಮುದೆಲ್ಪಾತೆರೊ
  1. ಭಾಷೆ
  2. ತುಳುವ ಪಾತೆರೊದ ಇತಿಹಾಸ
  3. ಶಬ್ಧ ವ್ಯುತ್ಪತ್ತಿ
ಕೊಡಿಪಾತೆರೊ
ಭಾಗ ರಡ್ಡ್:  ತುಳು ವ್ಯಾಕರಣ
ರಡ್ಡನೆಯ ಬಾಗೊಡು ಬರ್ಪಿನ ಪ್ರಕರಣೊಲು ಇಂಚ ಉಂಡು:
  1. ಅಕ್ಷರ ಪ್ರಕರಣ
  2. ಸಂಧಿ ಪ್ರಕರಣ
  3. ಶಬ್ಧ ಪ್ರಕರಣ
  4. ನಾಮ ಪ್ರಕರಣ
  5. ವಿಶೇಷಣ ಪ್ರಕರಣ
  6. ಧಾತು ಪ್ರಕರಣ
  7. ಕ್ರಿಯಾ ಪ್ರಕರಣ
  8. ಕೃದಾಂತ-ತಧ್ಧಿತಾಂತ ಪ್ರಕರಣ
  9. ಅವ್ಯಯ ಪ್ರಕರಣ
  10. ಸಮಾಸ ಪ್ರಕರಣ
  11. ತತ್ಸಮ ಪ್ರಕರಣ
  12. ವಾಕ್ಯ ಪ್ರಕರಣ
  13. ಲೇಖನ ಜಿಹ್ನೆ ಪ್ರಕರಣ
  14. ಜನಪದ ಸಾಹಿತ್ಯ
  15. ಭಾಷೆ-ಸಂಸ್ಕೃತಿ.

ಭಾಗ ೩:  ಅನುಬಂಧಲು.
ಮೂಜನೆಯ ಭಾಗೊಡು ಅನುಬಂಧೊಲೆನ್ ಸೇರಾದುಂಡು. ಅವು ಇಂಚ ಉಂಡು:

ಅನುಬಂಧ ೧: ಮೂಲ ದ್ರಾವಿಡೊಡ್ದ್ ಏಕಪ್ರವಾಹವಾದ್ ತುಳು-ಕನ್ನಡ ಭಾಷೆಲೆಗ್ ಬೈದಿನ ಪದಲು.
ಅನುಬಂಧ ೨: ಪ್ರಾಚೀನ ತಮಿಳು ಸಾಹಿತ್ಯೊಲೆಡ್ ತುಳುವ ಸಾಮಿಪ್ಯದ ಪದಲು
ಅನುಬಂಧ ೩: ಶಬ್ಧ ವ್ಯುತ್ಪತ್ತಿ- ದಕ್ಷಿಣ ಭಾರತದ ಮುಖ್ಯ ಭಾಷೆಲೆಗ್ ತುಳು ಸಾಮಿಪ್ಯ
ಅನುಬಂಧ ೪ ಅ: ತುಳು ಕ್ರಿಯಾ ಧಾತುಲು
ಅನುಬಂಧ ೪ ಇ: ಸಂಸ್ಕೃತ್ ಧಾತುರೂಪಲು- ಕೃದಾಂತ-ತಧ್ಧಿತಾಂತ (ಸಾಧಿತ ) ರೂಪಲು.
ಅನುಬಂಧ ೪ ಉ: ತುಳು ಧಾತುಲೆಡ್ದ್ ಕೃದಾಂತ-ತಧ್ಧಿತ ನಾಮಪದ ರಚನೆ.
ಅನುಬಂಧ ೫: ತುಳು ಲಿಂಗ್,ವಚನ ಕಾಲ ಪ್ರತ್ಯಯಲು, ಕ್ರಿಯಾಪದಲು.
ಕನ್ನಡ ಲಿಪಿ ವಿಕಾಸ.