Wednesday, 31 January 2018

ತುಳುರಾಜ್ಯದ ಬೇಡಿಕೆ ತಪ್ಪಿಸಲು ತುಳುವಿಗೆ ಸಂವಿಧಾನ ಮಾನ್ಯತೆ ಎಂಬ ನಾಟಕ ಮಾಡುಲಾಗುತ್ತಿಯೇ? © ಕಿರಣ್ ತುಳುವೆ

ತುಳುರಾಜ್ಯದ ಬೇಡಿಕೆ ತಪ್ಪಿಸಲು ತುಳುವಿಗೆ ಸಂವಿಧಾನ ಮಾನ್ಯತೆ ಎಂಬ ನಾಟಕ ಮಾಡುಲಾಗುತ್ತಿಯೇ?
© ಕಿರಣ್ ತುಳುವೆ


ಹೌದು ಇದು ನೂರಕ್ಕೆ ನೂರರಷ್ಚು ನಿಜ, ಯಾವುದೇ ಸರಕಾರ ಬಂದಾಗಲು ಕೇಂದ್ರದ ಕಡೆ ಬೊಟ್ಟು ಮಾಡಿ ನಮ್ಮನ್ನು ಯಾಮರಿಸಲಾಗುತ್ತಿದೆ

ಇದು ಕೇಂದ್ರದಲ್ಲಿ ಎರಡು ರೀತಿಯ ಸರಕಾರವಿದ್ದಾಗಲೂ, ರಾಜ್ಯದಲ್ಲಿ ಐದು ಪಕ್ಷದ ಸರಕಾರಗಳು (ಕೇರಳ ಮತ್ತು ಕರ್ನಾಟಕ) ಆಡಳಿತ ನಡೆಸಿದಾಗಲೂ ಕೇಂದ್ರಕ್ಕೆ ಬೊಟ್ಟು ಮಾಡಿ ಸಂವಿಧಾನಿಕ ಮಾನ್ಯತೆ ಎಂಬ ನಾಟಕ ಮಾಡಿ ತುಳುನಾಡಿಗರನ್ನು ಮೋಸ‌ ಮಾಡಲಾಗಿದೆ

ಮೊದಲ ಬಾರಿಗೆ  2001 ರಲ್ಲಿ ವಾಜಪೇಯಿ ಸರಕಾರ ಇರುವಾಗ ತುಳು ಬಾಷೆಯನ್ನು ಸಂವಿಧಾನಕ್ಕೆ  ಸೇರಿಸಲು  ಒತ್ತಾಯ ಮಾಡಲಾಯಿತು,

ಕೇಂದ್ರ ಸರಕಾರ ರಾಜ್ಯ ಸರಕಾರಕ್ಕೆ ಕೂಡಲೇ ವರದಿ ಕೊಡುವಂತೆ ಕೇಳಿಕೊಂಡಿತು.
ಆದರೆ ವರದಿ ಕೇಂದ್ರಕ್ಕೆ ತಲುಪಲೇ ಇಲ್ಲ
 ಆವಾಗ ಸಂವಿಧಾನಿಕ ಬೇಡಿಕ್ಕೆ ಇಟ್ಟ ಭಾಷೆಗಳ ಸಂಖ್ಯೆ ಕೇವಲ ಎರಡು. ತುಳುವನ್ನು ಸುಲಭದಲ್ಲಿ ಸೇರಿಸಬಹುದಿತ್ತು ರಾಜ್ಯ ಸರಕಾರ ಪ್ರಯತ್ನಿಸಿರುತ್ತಿದ್ದರೆ.

2003 ರಲ್ಲಿ ಸಂವಿಧಾನಕ್ಕೆ ಸೇರಿಸಲು ಭಾಷೆಗಳ ಸಂಖ್ಯೆಯಲ್ಲಿ ಏರಿಕೆ ಕಂಡಿತು, ಹಾಗಾಗಿ ಕೇಂದ್ರ ಸರಕಾರ ಸಂವಿಧಾನಕ್ಕೆ ಸೇರಿಸುವ ನಿಯಾಮವಳಿಯನ್ನು ಬದಲಾವಣೆ ಮಾಡಲು ಸಮಿತಿಯೊಂದನ್ನು ರಚಿಸಿ ಹೊಸ ನಿಯಾಮವಳಿಯನ್ನು ತಂದಿತು. ವಿಶೇಷ ಎಂದರೆ ಈ ನಿಯಾಮವಳಿಯನ್ನು ತುಳು ಭಾಷೆ ಸುಲಭವಾಗಿಯೇ ಗೆದ್ದಿತ್ತು  ಆದರೆ ರಾಜ್ಯ ಸರಕಾರಗಳಿಂದ ವರದಿ ತಲುಪಲೇ ಇಲ್ಲ

2009ರಲ್ಲಿ ಯಡ್ಯೂರಪ್ಪನವರು ತುಳುವನ್ನು ರಾಜ್ಯದ ಎರಡನೇ ಭಾಷೆಯಾಗಿ ಮಾಡುವುದಾಗಿ  ಹೇಳಿದ್ದರು, ಅದು ನಿಜವಾಗಲೇ ಇಲ್ಲ

2013 ರಲ್ಲಿ ತುಳು ಭಾಷೆಯಲ್ಲಿ ಪ್ರಮಾಣವಚನ ಸ್ವೀಕರಿಸು ಭಾವನಾತ್ಮಕವಾಗಿ, ಗೌರವಪೂರ್ವಕವಾಗಿ ವಸಂತ ಬಂಗೇರರವರಿಗೆ ಅವಕಾಶ ನೀಡಿ, ಮತ್ತೇ ಕನ್ನಡದಲ್ಲಿ ಪ್ರಮಾಣವಚನ ಮಾಡಿಸಬಹುದಿತ್ತು ಆದರೆ ತುಳುವಿನಲ್ಲಿ ಪ್ರಮಾಣ ವಚನ ಸ್ವೀಕರಿಸುವುದನ್ನು ತಡೆಯಲಾಯಿತು

ವಿಧಾನ ಸಭೆಯೋ ಅಥವಾ ವಿಧಾನ ಪರಿಷತ್ತೊ ಸರಿಯಾಗಿ ನೆನಪಿಲ್ಲ, ಓರ್ವ ಜನಪ್ರತಿನಿಧಿ "ತುಳು ಭಾಷೆಯ ಸಂವಿಧಾನಕ್ಕೆ ಸೇರಿಸುವ ವಿಚಾರ ಏನಾಗಿದೆ" ಎಂದಾಗ, ಇದಕ್ಕೆ ಉತ್ತರಿಸಿದ  ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಮಾಶ್ರೀಯವರು "ವರದಿ ಕೇಂದ್ರ ಸರಕಾರ ಕೇಳಿದೆ, ನಾವು ವರದಿ ಕೊಡುತ್ತೇವೆ" ಅಂದಿದ್ದರು.
ವರದಿ ಕೇಳಿರುವುದು 2001 ರಲ್ಲಿ, ಉಮಾಶ್ರೀಯವರು ಉತ್ತರಿಸಿರುವುದು 2014 ರಲ್ಲಿ. ಅಂದರೆ 13 ವರ್ಷವಾದರೂ ವರದಿ ತಲುಪಿಸಲಾಗಿಲ್ಲ.
ಈಗ 2018 ಈಗಲೂ ವರದಿ ತಲುಪಿದೆಯೇ ಗೊತ್ತಿಲ್ಲ

ತದ ನಂತರದ ನಾಟಕ ನೋಡಿ, ಕನ್ನಡ ಧ್ವಜಕ್ಕಾಗಿ ಸಮಿತಿ ಮಾಡಲಾಗಿದೆ,
ಆದರೆ ತುಳು ಸಂವಿಧಾನಕ್ಕೆ ಸೇರಿಸಲು ಯಾವುದೇ ಸಮಿತಿ ಮಾಡಿಲ್ಲ. ಅಂದರೆ ಈ ರಾಜ್ಯ ಮಾಡುತ್ತಿರುವುದು ನಾಟಕವಲ್ಲವೇ?

ಮತ್ತೊಂದು ವಿಚಾರ ನೆನಪಿಡಿ ಕೇರಳ ಮತ್ತು ಕರ್ನಾಟಕ ರಾಜ್ಯಗಳಪ ಐದು ಪಕ್ಷದ ಸರಕಾರವನ್ನು ಕಂಡಿದೆ,
ಆದರೆ ತುಳು ಸಂವಿಧಾನಿಕ ಮಾನ್ಯತೆಯ ವಿಚಾರದಲ್ಲಿ ಕೇಂದ್ರ ಸರಕಾರವನ್ನು ಬೊಟ್ಚು ಮಾಡುತ್ತಿವೆಯೇ ಹೊರತು ಯಾರೂ ದೃಢ ನಿರ್ಧಾರ ಕೈಗೊಂಡಿಲ್ಲ, ಯಾರೂ ಪ್ರಮಾಣಿಕ ಪ್ರಯತ್ನ ಮಾಡಿಲ್ಲ

ಹೇಗೆ ಅಂತೀರಾ?
ಗೋವಾ ರಾಜ್ಯ ರಚನೆ ಆದ ನಂತರ ಗೋವಾ ಸರಕಾರ ಕೊಂಕಣಿಯನ್ನು ಅಧಿಕೃತ ಭಾಷೆಯಾಗಿ ಮಾಡಿತ್ತು, ಆಗ ಕೊಂಕಣಿ ಸಂವಿಧಾನಕ್ಕೆ ಸೇರಿರಲಿಲ್ಲ. ಕೊಂಕಣಿ ಗೋವಾ ರಾಜ್ಯದ ಅಧಿಕೃತ ಭಾಷೆಯಾದ ನಂತರವೇ ಸಂವಿಧಾನಕ್ಕೆ ಸುಲಭವಾಗಿ ಸೇರಿತು

ಮತ್ತೊಂದು ವಿಚಾರ ನೆನಪಿರಲಿ ಕೊಂಕಣಿ ಮತ್ತು ತುಳು ಭಾಷಿಕರ ಸಂಖ್ಯೆ ಹೆಚ್ಚು ಕಡಿಮೆ ಒಂದೇ ಆಗಿದೆ ಆದರೆ ಕೊಂಕಣಿ ಯುನೆಸ್ಕೊದ "ಅಳಿವಿನಂಚಿನಲ್ಲಿರುವ ಭಾಷೆಗಳ ಪಟ್ಚಿಯಲ್ಲಿ ಸೇರಿಲ್ಲ, ಆದರೆ ತುಳು ಸೇರಿದೆ"

ಬಹುಶಃ ಸಂವಿಧಾನಿಕ ಮಾನ್ಯತೆ ಎಂಬ ನಾಟಕವನ್ನು ನಾವು ಈ ರಾಜ್ಯದಿಂದ ಕಲಿಯಬೇಕು

© ಕಿರಣ್ ತುಳುವೆ

Tuesday, 30 January 2018

ತುಳುನಾಡಿಗರ ಗಂಜಿಯ ಕರಕ್ಕೆ ಕಲ್ಲು ಬೀಳುತ್ತಿದೆ

ತುಳುನಾಡಿಗರ ಗಂಜಿಯ ಕರಕ್ಕೆ ಕಲ್ಲು ಬೀಳುತ್ತಿದೆ


 ಬಹುಭಾಷಿಕ ಕರ್ನಾಟದ ರಾಜಕೀಯ ಭಾಷೆ, ಸರಕಾರದ ಭಾಷೆ ತುಳು ಬ್ಯಾರಿ, ಕೊಡವ ಮುಂತಾದ ಭಾಷೆಗಳೂ ಕರ್ನಾಟಕದ ಭಾಷೆಗಳು. ಕರ್ನಾಟಕದ ಮಣ್ಣಿನ ಭಾಷೆಗಳು.

ಆದರೆ ವಾಸ್ತವವಾಗಿ ಏನಾಗಿದೆ ? ತುಳು ಕೊಂಕಣಿ,ಕೊಡವ ಭಾಷೆಗಳು ಕನ್ನಡದ ಬೆಳವಣಿಗೆಗೆ ಅಡ್ಡಿಯಾಗುತ್ತಿವೆ ಎಂಬ ಹೇಳಿಕೆಯನ್ನು ನಮ್ಮ ಕೆಲವು ಬುದ್ಧಿಜೀವಿಗಳೇ ಕೊಡುತ್ತಾರೆ. ಅದಕ್ಕೆ ನಾವು ಹೀಗೆ ಉತ್ತರ ಕೊಡಬಹುದು. ಅಂದರೆ ಅವರ ನಿರೀಕ್ಷೆ ಕೊಡಗು ಮತ್ತು  ತುಳುನಾಡು ಕರ್ನಾಟಕದಿಂದ ಬೇರೆ ಯಾಗಿ ಪ್ರತ್ಯೇಕ ರಾಜ್ಯ ಆದರೆ ಕನ್ನಡದ ಬೆಳವಣಿಗೆ ಲಾಭವಾಗುತ್ತದೆ ಎಂದೆ?

ತುಳುಭಾಷೆಯನ್ನು 8ನೇ ಪರಿಚ್ಛೇಧದಲ್ಲಿ ಸೇರಿಸುವಲ್ಲಿ ಕನ್ನಡಿಗರು ಆಸಕ್ತಿ ತಳೆಯುತ್ತಿಲ್ಲ. ಅದಕ್ಕಿಂತ ಹೆಚ್ಚಾಗಿ ತುಳುಭಾಷಾ ಪ್ರದೇಶ ಕಾಸರಗೋಡು ಕರ್ನಾಟಕದ ಕೈ ಬಿಟ್ಟಾಗಲೂ ಕರ್ನಾಟಕದ ಜನತೆ ಅದನ್ನು ಪ್ರತಿಭಟಿಸಿ ಮರಳಿ ಕರ್ನಾಟಕದಲ್ಲಿ ಉಳಿಸುವ ಪ್ರಯತ್ನ ಮಾಡಲಿಲ್ಲ. ಕನ್ನಡಿಗರ ಈ ನಿರಾಸಕ್ತಿಗೆ ಕಾಸರಗೋಡು ತುಳುಭಾಷಾ ಪ್ರದೇಶವಾಗಿದ್ದು ಕಾರಣವಾಗಿದೆ ಎನ್ನುವುದು ಈ ಭಾಗದ ಕನ್ನಡ ಏಕೀಕರಣ ಹೋರಾಟಗಾರರ ನೋವು. ಬೆಳಗಾವಿ,ಸೊಲ್ಲಾಪುರ, ಕೊಲ್ಲಾಪುರ ಬಗ್ಗೆ ಇದ್ದ ಆಸಕ್ತಿ ಕಾಸರಗೋಡಿಗೆ ಇಲ್ಲವಾಗಲು “ಅವರು ತುಳುವರು” ಎನ್ನುವುದು ಕಾರಣ ಇದು ನನ್ನ ಮಾತಲ್ಲ. ಕಯ್ಯಾರ ಕಿಞ್ಞಣ್ಣ ರೈ ಅವರ ನೋವಿನ ನುಡಿ.

ಐತಿಹಾಸಿಕ ಕಾಲದಿಂದಲೂ ರಾಜಾಶ್ರಯ ಇಲ್ಲದೆ ಉಳಿದು ಬಂದ ಭಾಷೆ ಮತ್ತು ಸಂಸ್ಖತಿ ತುಳು. ಚಲಾವಣೆಯಲ್ಲಿ ಇದ್ದ ತುಳು ಲಿಪಿ ಯಾಕೆ ಬಳಕೆ ತಪ್ಪಿತು ಎನ್ನುವುದಕ್ಕೆ ಹಲವು ಕಾರಣಗಳು ಇದ್ದರೂ ಮುಖ್ಯವಾದ ಕಾರಣ ಅದಕ್ಕೆ ರಾಜಾಶ್ರಯ ಇಲ್ಲದೆ ಇರುವುದು. ರಾಜಾಶ್ರಯ ಇಲ್ಲದೆ ತುಳುನಾಡಿನ ಪ್ರಾದೇಶಿಕ ಭಾಷೆ ಜನಸಾಮಾನ್ಯರ ಭಾಷೆಯಾಗಿ ಉಳಿದಿದೆ ಹೆಚ್ಚುಗಾರಿಕೆ. ಇದಕ್ಕೆ ಕಾರಣ ಇಲ್ಲಿನ ಉಪಾಸನಾ ಸಂಸ್ಕøತಿ. ತುಳುನಾಡಿನ ಉಪಾಸನೆಯ ಶ್ರೀಮಂತ ನುಡಿಗಟ್ಟುಗಳು ಪಾಡ್ದನಗಳು ತುಳುಭಾಷೆಯಲ್ಲಿ ಇರುವುದರಿಂದ ತುಳುಭಾಷೆ ಇನ್ನಿತರ ಭಾಷೆಗಳಿಂದ ಶ್ರೀಮಂತಗೊಂಡಿದೆ ಎಂದರೆ ತಪ್ಪಾಗಲಾರದು.

ತುಳುನಾಡಿನ ಎಲ್ಲಾ ಭಾಷಿಕರು ಮಾತ್ರವಲ್ಲ ಮತಧರ್ಮೀಯರೂ  ತುಳುಭಾಷೆಯ ಮೂಲಕ ವ್ಯವಹಾರ ಮತ್ತು ಸಾಹಿತ್ಯ ರಚನೆಯಲ್ಲಿ ತೊಡಗಿದ್ದಾರೆ. ಇದರಿಂದಾಗಿ ತುಳುನಾಡಿನ ತುಳುಭಾಷೆ ಎಲ್ಲಾ ಭಾಷಿಕರ ಸೌರ್ಹಾದೆಯನ್ನು ಕಾಪಾಡಿಕೊಂಡು ಬಂದಿದೆ.

ಶಾಸ್ತೀಯ ಸ್ಥಾನ ಮಾನಕ್ಕೆ ತುಳುಭಾಷೆ ಅರ್ಹತೆಯನ್ನು ಪಡೆದುಕೊಂಡಿದೆ. ಮೌರ್ಯಮತ್ತು ಸಂಘಂ ಸಾಹಿತ್ಯ ತುಳು ಭಾಷೆಯ ಪ್ರಾಚೀನತೆಯ ಸುಳಿವು ಕೊಡುತ್ತದೆ. ಆದರೂ ತುಳು ಭಾಷೆ ಕರ್ನಾಟಕ ಸರಕಾರದ ಅವಗಣನೆಗೆ ಒಳಗಾಗಿದೆ.

"ಅಂಚಿ ತೆಲುಗೆರ್ ಇಂಚಿ ಕನಡೆರ್
ಎಂಚ ತಮಿಳೆರ್ ಮೆರೆಪೆರ್
ಕಣ್ಣೆದುರು ಕೇರಳ ಮೆರೆಪುಂಡು
ಎನ್ನ ತುಳುನಾಡ್ ಬುಲಿಪುಂಡು"

“ಆಚೆ ತೆಲುಗರು, ಈಚೆ ಕನಡರು
 ಹೇಗೆ ತಮಿಳರು ಮೆರೆವರು
ಕಣ್ಣೆದುರು ಕೇರಳ ಕೆನೆಯುತ್ತಿದೆ
ಎನ್ನ ತುಳುನಾಡು ಅಳುತ್ತಿದೆ. “

ಕರ್ನಾಟಕ ಏಕೀಕರಣ ಚಳುವಳಿಯ ಪ್ರಮುಖ ಹೋರಾಟಗಾರ ಕವಿ ಕಯ್ಯಾರ ಕಿಞ್ಞಣ್ಣ ರೈ ಅವರ ಹತಾಶ ನುಡಿಗಳಿವು.
ಈಗ ಅಂತಹ ಹತಾಶೆ ತುಳುನಾಡಿನ ಜನಸಾಮಾನ್ಯರಿಗಾಗಿದೆ. ಎತ್ತಿನ ಹೊಳೆ ಮೂಲಕ ತುಳುನಾಡನ್ನು ಅವಮಾನ ಮಾಡುತ್ತಿದೆ  ಸರಕಾರ. ಫಲವತ್ತಾದ ಮಣ್ಣಿನ ಕೃಷಿ ಭೂಮಿಯಾಗಿದ್ದ ತುಳುನಾಡಿನಲ್ಲಿ ವಿಷವನ್ನು ಫೂತ್ಕರಿಸುವ ಕಾರ್ಖಾನೆಗಳನ್ನು ತಂದು ಹಾಕಿ ತುಳುನಾಡಿನ ಮಣ್ಣಿಗೆ ಮತ್ತು ಮಣ್ಣಿನ ಸಂಸ್ಕøತಿಗೆ ಗದಾ ಪ್ರಹಾರ ಮಾಡಿದೆ.ಮತ್ತೂ ಮಾಡಲು ಹೊರಟಿದೆ. ಬಹುಷ: 1995 ಇರಬೇಕು. ಡಾ. ಶಿವರಾಮ ಕಾರಂತರು ಬೆಂಗಳೂರಿನಿಂದ ಮಂಗಳೂರಿಗೆ ವಿಮಾನ ಮೂಲಕ ಹೋಗುವವರಿದ್ದರು. ಆಗ ಅಲ್ಲಿಂದ ಬಂದ ಸುದ್ದಿ : ‘ಮೀನುಗಾರ ಮಹಿಳೆಯರು ಎಮ್ ಆರ್ .ಪಿ. ಎಲ್ ವಿರುದ್ಧ ಮುಷ್ಕರ ಹೂಡಿದ್ದಾರೆ. ರಸ್ತೆ ತಡೆ ನಡೆಸುತ್ತಿದ್ದಾರೆ. ಬಜಿಪೆಯಿಂದ ಕುಂದಾಪುರ ತಲುಪಲು ಕಷ್ಟವಾಗಬಹುದು’ ಎಂದು. ಶಿವರಾಮ ಕಾರಂತರು ಬಳಿ ಇದ್ದ ನನಗೆ ವಿವರಿಸಿದ್ದು ಹೀಗೆ : ಪಾಪ ಅವರ ಗಂಜಿಯ ಕರಕ್ಕೆ (ಅನ್ನದ ಮಡಕೆ) ಕಲ್ಲು ಹಾಕಿದೆ ಎಮ್ ಆರ್ ಪಿ. ಎಲ್. ಅವರು ಬೀದಿಗಿಳಿದು ಹೋರಾಡುವುದು ಅನಿವಾರ್ಯ.

ಈಗ ಇಡೀ ತುಳುನಾಡು ಬೀದಿಗಿಳಿದು ಹೋರಾಡಬೇಕಾಗಿದೆ. ತುಳುನಾಡಿಗರ ಗಂಜಿಯ ಕರಕ್ಕೆ ಕಲ್ಲು ಬೀಳುತ್ತಿದೆ. ಅನ್ನದ 'ಕರ ಒಟ್ಟೆ' (ತೂತು) ಆಗಿ ನೀರು ಸೋರಿ ಒಲೆ ಆರುತ್ತಿದೆ.....ಎದ್ದೇಳಿ....

ಡಾ. ಇಂದಿರಾ ಹೆಗ್ಗಡೆ

ತುಳುನಾಡೇತರ ಪ್ರದೇಶದಲ್ಲಿ ಹಾರಿಸಲಿ, ತುಳು ಪ್ರದೇಶದಲ್ಲಿ ಬೇಕೇ?

ಅಂದು ಸ್ವತಂತ್ರ ಭಾರತದಲ್ಲಿ 1953 ರಲ್ಲಿ ಭಾಷಾವಾರು ರಾಜ್ಯ ರಚನೆಗೆ ಮೊದಲ ಕೂಗೊಂದು ಆಂಧ್ರದಲ್ಲಿ ಮೊಳಗಿತ್ತು, ತದ ನಂತರ ಇದು ಇತರೆಡೆ ಹಬ್ಬಿ ಹಲವಾರು ಭಾಷಾವಾರು ರಾಜ್ಯ ರಚನೆಯಾಯಿತು



ಮುಂದೆ ಹಿಂದಿ ಗುಮಾನಿಯ ನಡುವೆ
1960 ರ ಹೊತ್ತಿಗೆ ದ್ರಾವಿಡ ಚಳುವಳಿಯು ತಮಿಳುನಾಡಿನಲ್ಲಿ ಜೋರಾಗಿಯೇ ನಡೆಯಿತು,
ಇದರ ಪ್ರಭಾವ ತಮಿಳರು ನೆಲೆಸಿರುವ ಬೆಂಗಳೂರಿಗೂ ತಟ್ಚಿತು

ದ್ರಾವಿಡ ಚಳುವಳಿಯ ಮುಂಚೂಣಿಯಲ್ಲಿದ್ದ ಡಿಮ್ಕೆ ಪಕ್ಷವು ತನ್ನ‌ ಕಪ್ಪು ಕೆಂಪು ಬಣ್ಣದ ಧ್ವಜವನ್ನು ಬೆಂಗಳೂರಿನಲ್ಲಿಯೂ ಸ್ಥಾಪಿಸಲು ಹೋಯಿತು

ಈ ಡಿಮ್ಕೆಯ ಹವಾವನ್ನು ತಪ್ಪಿಸುವ ಉದ್ದೇಶದಿಂದ‌ ಪ್ರಾದೇಶಿಕ ಪಕ್ಷಬೇಕೆಂದು ಮನಗಂಡ ಇಲ್ಲಿನ ನಾಯಕರು 1965 ರಲ್ಲಿ ಕನ್ನಡ ಪಕ್ಷ ಸ್ಥಾಪಿಸಿದರು

ದ್ರಾವಿಡ ಚಳುವಳಿಗೆ ಹಿನ್ನೆಡೆಯಾಗಬಾರದೆಂಬ ಉದ್ದೇಶದಿಂದ ಮಾತುಕತೆಯ ಮೂಲಕ ಡಿಮ್ಕೆ ಪಕ್ಷದ ಕೆಂಪು-ಕಪ್ಪು ಬಣ್ಣಕ್ಕೆ ಪರ್ಯಾಯವಾಗಿ ಹಳದಿ-ಕೆಂಪು ಬಣ್ಣದ ಧ್ವಜವೊಂದನ್ನು ಕನ್ನಡ ಪಕ್ಷಕ್ಕಾಗಿ ಸಿದ್ಧಪಡಿಸಿದರು

ಇದು ಮುಂದೆ ಪಕ್ಷದ ಧ್ವಜವಾಗಿಯೇ ಚುನಾವಣೆ ಆಯೋಗದಲ್ಲಿ ನೋಂದಾವಣೆಗೊಂಡಿತು

1998 ರಲ್ಲಿ ಕನ್ನಡ ಪ್ರಾಧಿಕಾರ ಇದನ್ನು ನಾಡಧ್ವಜವಾಗಿ ಮಾಡಲು ಹೊರಟಿತ್ತಾದರೂ ಪಕ್ಷದ ಧ್ವಜ ನಾಡ ಧ್ವಜ ಮಾಡಲು ಸ್ವತಃ ಕನ್ನಡ ಪಕ್ಷವೇ ವಿರೋಧ ವ್ಯಕ್ತ ಪಡಿಸಿತು

ಈಗ ಈ ರಾಜಕೀಯ ಪಕ್ಷಕ್ಕಾಗಿ ಮಾಡಿದ ಧ್ವಜವನ್ನು ನಮ್ಮ ಮೇಲೆ ಹೇರುವುದು ಯಾಕೆ ಎಂಬುದು ನಮ್ಮ ಪ್ರಶ್ನೆ

ಅಂದು ಸ್ವತಂತ್ರ ಭಾರತದಲ್ಲಿ 1953 ರಲ್ಲಿ ಭಾಷಾವಾರು ರಾಜ್ಯ ರಚನೆಗೆ ಮೊದಲ ಕೂಗೊಂದು ಆಂಧ್ರದಲ್ಲಿ ಮೊಳಗಿತ್ತು, ತದ ನಂತರ ಇದು ಇತರೆಡೆ ಹಬ್ಬಿ ಹಲವಾರು ಭಾಷಾವಾರು ರಾಜ್ಯ ರಚನೆಯಾಯಿತು

ಮುಂದೆ ಹಿಂದಿ ಗುಮಾನಿಯ ನಡುವೆ
1960 ರ ಹೊತ್ತಿಗೆ ದ್ರಾವಿಡ ಚಳುವಳಿಯು ತಮಿಳುನಾಡಿನಲ್ಲಿ ಜೋರಾಗಿಯೇ ನಡೆಯಿತು,
ಇದರ ಪ್ರಭಾವ ತಮಿಳರು ನೆಲೆಸಿರುವ ಬೆಂಗಳೂರಿಗೂ ತಟ್ಚಿತು

ದ್ರಾವಿಡ ಚಳುವಳಿಯ ಮುಂಚೂಣಿಯಲ್ಲಿದ್ದ ಡಿಮ್ಕೆ ಪಕ್ಷವು ತನ್ನ‌ ಕಪ್ಪು ಕೆಂಪು ಬಣ್ಣದ ಧ್ವಜವನ್ನು ಬೆಂಗಳೂರಿನಲ್ಲಿಯೂ ಸ್ಥಾಪಿಸಲು ಹೋಯಿತು

ಈ ಡಿಮ್ಕೆಯ ಹವಾವನ್ನು ತಪ್ಪಿಸುವ ಉದ್ದೇಶದಿಂದ‌ ಪ್ರಾದೇಶಿಕ ಪಕ್ಷಬೇಕೆಂದು ಮನಗಂಡ ಇಲ್ಲಿನ ನಾಯಕರು 1965 ರಲ್ಲಿ ಕನ್ನಡ ಪಕ್ಷ ಸ್ಥಾಪಿಸಿದರು

ದ್ರಾವಿಡ ಚಳುವಳಿಗೆ ಹಿನ್ನೆಡೆಯಾಗಬಾರದೆಂಬ ಉದ್ದೇಶದಿಂದ ಮಾತುಕತೆಯ ಮೂಲಕ ಡಿಮ್ಕೆ ಪಕ್ಷದ ಕೆಂಪು-ಕಪ್ಪು ಬಣ್ಣಕ್ಕೆ ಪರ್ಯಾಯವಾಗಿ ಹಳದಿ-ಕೆಂಪು ಬಣ್ಣದ ಧ್ವಜವೊಂದನ್ನು ಕನ್ನಡ ಪಕ್ಷಕ್ಕಾಗಿ ಸಿದ್ಧಪಡಿಸಿದರು

ಇದು ಮುಂದೆ ಪಕ್ಷದ ಧ್ವಜವಾಗಿಯೇ ಚುನಾವಣೆ ಆಯೋಗದಲ್ಲಿ ನೋಂದಾವಣೆಗೊಂಡಿತು

1998 ರಲ್ಲಿ ಕನ್ನಡ ಪ್ರಾಧಿಕಾರ ಇದನ್ನು ನಾಡಧ್ವಜವಾಗಿ ಮಾಡಲು ಹೊರಟಿತ್ತಾದರೂ ಪಕ್ಷದ ಧ್ವಜ ನಾಡ ಧ್ವಜ ಮಾಡಲು ಸ್ವತಃ ಕನ್ನಡ ಪಕ್ಷವೇ ವಿರೋಧ ವ್ಯಕ್ತ ಪಡಿಸಿತು

ಈಗ ಈ ರಾಜಕೀಯ ಪಕ್ಷಕ್ಕಾಗಿ ಮಾಡಿದ ಧ್ವಜವನ್ನು ನಮ್ಮ ಮೇಲೆ ಹೇರುವುದು ಯಾಕೆ ಎಂಬುದು ನಮ್ಮ ಪ್ರಶ್ನೆ
ಅಂದು ಸ್ವತಂತ್ರ ಭಾರತದಲ್ಲಿ 1953ನೇ ಇಸವಿಯಲ್ಲಿ ಭಾಷಾವಾರು ರಾಜ್ಯ ರಚನೆಗೆ ಮೊದಲ ಕೂಗೊಂದು ಆಂಧ್ರದಲ್ಲಿ ಮೊಳಗಿತ್ತು, ತದ ನಂತರ ಇದು ಇತರೆಡೆ ಹಬ್ಬಿ ಹಲವಾರು ಭಾಷಾವಾರು ರಾಜ್ಯ ರಚನೆಯಾಯಿತು

ಮುಂದೆ ಹಿಂದಿ ಗುಮಾನಿಯ ನಡುವೆ
1960 ರ ಹೊತ್ತಿಗೆ ದ್ರಾವಿಡ ಚಳುವಳಿಯು ತಮಿಳುನಾಡಿನಲ್ಲಿ ಜೋರಾಗಿಯೇ ನಡೆಯಿತು,
ಇದರ ಪ್ರಭಾವ ತಮಿಳರು ನೆಲೆಸಿರುವ ಬೆಂಗಳೂರಿಗೂ ತಟ್ಚಿತು

ದ್ರಾವಿಡ ಚಳುವಳಿಯ ಮುಂಚೂಣಿಯಲ್ಲಿದ್ದ ಡಿಮ್ಕೆ ಪಕ್ಷವು ತನ್ನ‌ ಕಪ್ಪು ಕೆಂಪು ಬಣ್ಣದ ಧ್ವಜವನ್ನು ಬೆಂಗಳೂರಿನಲ್ಲಿಯೂ ಸ್ಥಾಪಿಸಲು ಹೋಯಿತು

ಈ ಡಿಮ್ಕೆಯ ಹವಾವನ್ನು ತಪ್ಪಿಸುವ ಉದ್ದೇಶದಿಂದ‌ ಪ್ರಾದೇಶಿಕ ಪಕ್ಷಬೇಕೆಂದು ಮನಗಂಡ ಇಲ್ಲಿನ ನಾಯಕರು 1965 ರಲ್ಲಿ ಕನ್ನಡ ಪಕ್ಷ ಸ್ಥಾಪಿಸಿದರು

ದ್ರಾವಿಡ ಚಳುವಳಿಗೆ ಹಿನ್ನೆಡೆಯಾಗಬಾರದೆಂಬ ಉದ್ದೇಶದಿಂದ ಮಾತುಕತೆಯ ಮೂಲಕ ಡಿಮ್ಕೆ ಪಕ್ಷದ ಕೆಂಪು-ಕಪ್ಪು ಬಣ್ಣಕ್ಕೆ ಪರ್ಯಾಯವಾಗಿ ಹಳದಿ-ಕೆಂಪು ಬಣ್ಣದ ಧ್ವಜವೊಂದನ್ನು ಕನ್ನಡ ಪಕ್ಷಕ್ಕಾಗಿ ಸಿದ್ಧಪಡಿಸಿದರು

ಇದು ಮುಂದೆ ಪಕ್ಷದ ಧ್ವಜವಾಗಿಯೇ ಚುನಾವಣೆ ಆಯೋಗದಲ್ಲಿ ನೋಂದಾವಣೆಗೊಂಡಿತು

1998 ರಲ್ಲಿ ಕನ್ನಡ ಪ್ರಾಧಿಕಾರ ಇದನ್ನು ನಾಡಧ್ವಜವಾಗಿ ಮಾಡಲು ಹೊರಟಿತ್ತಾದರೂ ಪಕ್ಷದ ಧ್ವಜ ನಾಡ ಧ್ವಜ ಮಾಡಲು ಸ್ವತಃ ಕನ್ನಡ ಪಕ್ಷವೇ ವಿರೋಧ ವ್ಯಕ್ತ ಪಡಿಸಿತು

ಈಗ ಈ ರಾಜಕೀಯ ಪಕ್ಷಕ್ಕಾಗಿ ಮಾಡಿದ ಧ್ವಜವನ್ನು ನಮ್ಮ ಮೇಲೆ ಹೇರುವುದು ಯಾಕೆ ಎಂಬುದು ನಮ್ಮ ಪ್ರಶ್ನೆ

ತುಳುನಾಡೇತರ ಪ್ರದೇಶದಲ್ಲಿ ಹಾರಿಸಲಿ, ತುಳು ಪ್ರದೇಶದಲ್ಲಿ ಬೇಕೇ?

Friday, 8 September 2017

ನವೆಂಬರ್ ಒಂದರಂದು ಕರಾಳ ದಿನದ ಎಚ್ಚರಿಕೆ

*ನವೆಂಬರ್ ಒಂದರಂದು ಕರಾಳ ದಿನದ ಎಚ್ಚರಿಕೆ*



ನವೆಂಬರ್ ಒಂದರೊಳಗೆ ತುಳು ಭಾಷೆಯನ್ನು ಸಂವಿಧಾನಕ್ಕೆ ಸೇರಿಸಲು ರಾಜ್ಯ ಸರಕಾರ ಕಂಬಳಕ್ಕೆ ಮಾಡಿದ ಹಾಗೆ *ವಿಶೇಷ ಅಧಿವೇಶನ* ಕರೆದು ತುಳು ಭಾಷೆಯನ್ನು ರಾಜ್ಯದ *ಅಧಿಕೃತ ಭಾಷೆ* ಎಂದು ಅಂಗೀಕರಿಸಿ ಕೇಂದ್ರ ಸರಕಾರಕ್ಕೆ ಸಂವಿಧಾನಕ್ಕೆ ಸೇರಿಸಲು ಒತ್ತಡ ಹೇರಬೇಕು

ಇಲ್ಲದೇ ಹೋದಲ್ಲಿ *ನವೆಂಬರ್ ಒಂದ*ರಂದು ತುಳುನಾಡಿದ್ಯಾಂತ *ಕರಾಳ ದಿನ*ವಾಗಿ ಆಚರಿಸಲಾಗುವುದು ಮತ್ತು ಕರಾಳದಿನದ ಅಂಗವಾಗಿ *ನವೆಂಬರ್ ಒಂದು* ತಾರೀಕಿನಂದು #BlackDayForTulunad ಎಂಬ ಹ್ಯಾಶ್ ಟ್ಯಾಗ್ ಮೂಲಕ *ಬೃಹತ್ ಟ್ವೀಟರ್ ಅಭಿಯಾನ* ಮಾಡಿ ರಾಜ್ಯದ ಮಲತಾಯಿ ಧೋರಣೆ ವಿರುದ್ಧ ಪ್ರತಿಭಟಿಸುವ ಮತ್ತು ಎರಡು ರಾಜ್ಯಕ್ಕೆ ಹಂಚಿಹೋದ *ತುಳುನಾಡನ್ನು ಏಕೀಕರಣ*ಗೊಳಿಸುವ ಚಳುವಳಿಯ ಭಾಗವಾಗಿ *ಕರಾಳದಿನ* ಆಚರಿಸುವ ನಿರ್ಣಯವನ್ನು ತುಳು ಸಂಘಟನೆಗಳ ಒಕ್ಕೂಟವಾದ *ತುಳುನಾಡು ಏಕೀಕರಣ ಸಮಿತಿ*ಯು ತೆಗೆದುಕೊಂಡಿದೆ

ಮನವಿ ಕೊಟ್ಟು ಕೊಟ್ಟು ತುಳುನಾಡಿಗೇ  ತುಳುನಾಡೇ ಸುಸ್ತಾಗಿದೆ.
ಇನ್ನು ಮನವಿಯ ಮಾತಿಲ್ಲ.
*ಫಲಿತಾಂಶದ ಮಾತಷ್ಟೇ.*

ಜೈ ತುಳುನಾಡ್

Wednesday, 19 July 2017

ಆಟಿ ತಿಂಗೊಳುಡು ಪೊಸ ಮದಿಮಲ್ ಆಟಿ ಕುಲ್ಲುನ ಕ್ರಮ ದಾಯೆ..?

ಆಟಿ ತಿಂಗೊಳುಡು ಪೊಸ ಮದಿಮಲ್ ಆಟಿ ಕುಲ್ಲುನ ಕ್ರಮ : ಪೊಸ ಮದಿಮಲ್ ಆಟಿ ಕುಲ್ಲುನ ಕ್ರಮ ದಾಯೆ..?

ಆ ಕಲೋಡ್ ಆಟಿ ಬಾರಿ ಕಡು ಕಷ್ಟದ ತಿಂಗೊಲು. ಆತಿ ತಿಂಗೊಳುಡು ಕಂಡ - ತೋಟದ ಕೆಲಸ ಕಡಿಮೆ. ಪೊಸ ಮದಿಮಾಯೆ ಮದಿಮಾಲ್ ಆಟಿ ತಿಂಗೊಳುಡು ಒಟ್ಟಿಗುಪ್ಪೆರೆ ಬಲ್ಲಿ ಪನ್ಪಿನ ನಂಬಿಕೆ ಉಂಡು.ಅಂಚಾದ್ ಆಟಿ ಸುರುವಾಯಿವೆಟ್ಟಿಗೆ ಪೊಣ್ಣನ ಅಪ್ಪೆ ಅಮ್ಮೆ ಬತ್ತ್ದ್ ಮದ್ಮಲೆನ್ ತಮೆರಿಗ್ ಲೆತೊಂದು ಪೋಪಿನ ಕ್ರಮ ಉಂಡು.ಆಟಿಡ್ ಪೊಣ್ಣು ಬಂಜ್ಯೊತ್ತೆರೆ ಬಲ್ಲಿಗೆ. ಆಟಿಡ್ ಬಿತ್ತ್ ಬಿತ್ತುಜೆರ್,ದಯಿ ನಡ್ಪುಜೆರ್,ಏಣೆಲ್ ಬೆನ್ನಿ ಆಟಿಗ್ ದುಂಬೇ ಮುಗಿಪ್ಪುನ ರೂಢಿ.ಈ ಪದ್ಧತಿ ತಮಿಳುನಾಡ್ಡ್ಲ ಉಂಡು.ಅಕುಲು ಆಟಿಗ್ 'ಆಡಿ' ಪನ್ಪೆರ್.

ಆಟಿಡ್ಬಂ ಜ್ಯೊತ್ತಿನಾಲ್ ಸುಗ್ಗಿಡ್ ಪೆದ್ದ್ಬಲ್.ಸುಗ್ಗಿ ಅಗ್ಗಿದ ತಿಂಗೊಲು.ಸುಗ್ಗಿದ ಬಾಲೆ ಬದುಕುನ ಕಷ್ಟ ಪನ್ಪಿನ ನಂಬಿಕೆ ಆ ಕಾಲೊಡಿತ್ತ್ಂಡ್.ಅಂಚಾದೆ ಪೊಸ ಮದಿಮಲ್ ಆಟಿ ಕುಲ್ಲುನ ಕ್ರಮ ಸುರುವಾಂಡ್.ಆಟಿ ಕುಲ್ಲುನ ರಿವಾಜ್ ಚಾಮರಾಜನಗರ ಜಿಲ್ಲೆಡ್ಲ ಉಂಡು.ಆ ಜಿಲ್ಲೆದ ದೇವಸ್ಥಾನೊಡು ಒಂಜಿ ಮಲ್ಲ ಉಚ್ಚಯ ಆಪುಂಡು.ಆನಿ ಮಾತ್ರ ಪೊಸ ಕಂಡನಿ ಬುಡೆದಿ ಒಟ್ಟು ಸೇರ್ದ್ಪಾ ತೆರೊಲಿ.ಅಕುಲು ಚಾಂದ್ರಮಾನ ಪದ್ಧತಿದಕುಲು.ಆಟಿನ್ ಆಷಾಢ ಪನ್ಪೆರ್. ಕರ್ನಾಟಕೊದ ಬಾಕಿ ಕೋಡಿಡ್ಲ ಆಷಾಢ ತಿಂಗೊಲು ಪಂಡಾ ಅನಿಷ್ಟೊದ ತಿಂಗೊಲು.
Courtesy : © Beauty of Tulunad | (ರೆಫರೆನ್ಸ್: ಪಾಲ್ತಾಡಿ ರಾಮಕೃಷ್ಣ ಆಚಾರ್,ಪುತ್ತೂರು)

...spb...

Tuesday, 18 July 2017

ಸ್ವಾಭಿಮಾನಿ ಕನ್ನಡಿಗರು

ಕಾಲ್ಪನಿಕ ಸತ್ಯ 😄

ವರ್ಷ 21/04/2060

ಚಾನೆಲ್ - ಸ್ವಾಭಿಮಾನಿ ಕನ್ನಡಿಗರು

ಕನ್ನಡ ರಾಜ್ಯದ ಪ್ರಸಿದ್ಧ ಟಿವಿ ಚಾನೆಲ್ ಲಾದ "ಸ್ವಾಭಿಮಾನಿ ಕನ್ನಡಿಗರು" ದಲ್ಲಿ ವಿಶೇಷವಾಗಿ ಬಿತ್ತರವಾದ "ಕಟ್ಟ ಕಡೆಯ ತುಳುವ" ಕಾರ್ಯಕ್ರಮದ ಎಂಬುದರ ಒಂದು ಭಾಗ - 1

ಸಂದರ್ಶಕ - ಸರ್, ನಿಮ್ಮನ್ನು ಸಂದರ್ಶನ ಮಾಡುವುದು ನಮಗೆ ಗೌರವ ಹಾಗು ಅಷ್ಟೇ ಸಂತೋಷದ ವಿಷಯ ವಿಷಯ, ಈ ಅಖಂಡ ಕರ್ನಾಟಕದಲ್ಲಿ ಸ್ಪಷ್ಟವಾಗಿ ತುಳು ಮಾತಾಡುವ ಒಬ್ಬ ಇನ್ನೂ ಉಳಿದಿದ್ದಾರೆ ಎಂದರೆ ನಿಮ್ಮ ಬಗೆ ಹಾಗು ಈ ರಾಜ್ಯದ ಬಗೆ ಹೆಮ್ಮೆಯಾಗುತ್ತಿದೆ ಹಾಗು ಅಷ್ಟೇ ಆಶ್ಚರ್ಯವಾಗುತ್ತಿದೆ! ನಮ್ಮದು ಕನ್ನಡ ರಾಜ್ಯವಾದರೂ ಇಲ್ಲಿನ ಇರುವ ಎಲ್ಲಾ ಚಿಕ್ಕ ಚಿಕ್ಕ ಭಾಷೆಗಳಿಗೂ ನಾವು ಬೆಲೆ ಕೊಡುತ್ತವೆ, ಗೌರವಿಸುತ್ತೇವೆ, ಅದರ ಉದ್ಧಾರಕ್ಕಾಗಿ ಶ್ರಮ ಕೊಡುತ್ತವೆ, ಅದರ ಬಗೆ ಕಾಳಜಿ ಇದ್ದೇ ಇದೆ. ಆದರೆ ಸರಕಾರ ಹಾಗು ಕನ್ನಡಿಗರು ತುಳು ಬಾಷೆಯ ಉಳಿವಿಗಾಗಿ ಎಷ್ಟೇ ಪ್ರೋತ್ಸಾಹ ಕೊಟ್ಟರೂ ಈ ರಾಜ್ಯದ ಬಾಷೆ ನಾಶವಾಗಲು ಕಾರಣ ನೀವೇ ಹೊರತು ಕನ್ನಡವಲ್ಲ, ಇದು ಈಗ ಇತಿಹಾಸ,

ಮೊದಲನೆಯ ಪ್ರಶ್ನೆ - ಈ ರಾಜ್ಯದಲ್ಲಿ ಆಡಳಿತ ಬಾಷೆ ಹಾಗು ಎಲ್ಲಾ ವ್ಯವಹಾರಗಳು ಕನ್ನಡದಲ್ಲಿ ಇರುವಾಗ ನೀವು ನಿಮ್ಮ ಮನೆಯಲ್ಲಿ  ಮನೆಯವರ ಜೊತೆಗೆ ತುಳುವಿನಲ್ಲಿ ವ್ಯವಹಾರ ಮಾಡುತ್ತೀರಿ ಎಂದು ಕೇಳಿದ್ದೆ! ಇದು ಸತ್ಯನಾ ಸರ್.. ಮಾತಾಡಿ ಆದರೆ ಇದು ಸವಿಂಧಾನದ 645 ಕಾಲಂನ ಪ್ರಕಾರ ಇದು ರಾಜ್ಯ ದ್ರೋಹ ಅನಿಸುವುದಿಲ್ವಾ? ನಿಮ್ಮನು ರಾಜ್ಯ ದ್ರೋಹದ ಬಗೆ ಜೈಲಿಗೆ ಹಾಕಬಾರದು? ಅಲ್ಲದೆ ನಾನು ಕನ್ನಡಿಗ ಅಲ್ಲ ತುಳುವ ಎಂದು ಹೇಳಿಕೆ ಕೊಟ್ಟ ವಿಷಯ ಬಹಿರಂಗವಾಗಿದೆ.

ಅಷ್ಟೊತ್ತು ನಾನು ಈ ಪ್ರಪಂಚದಲ್ಲಿ ಇರುವ ಒಬ್ಬನೇ ಒಬ್ಬ ತುಳುವ ಎಂದು ಜಂಭ ಕೊಚ್ಚುತ್ತಿದ್ದ ಆ ಕಟ್ಟ ಕಡೆಯ ತುಳುವ ಭಯದಿಂದ ಕರ್ಚೀಫಿನಿಂದ ಬೆವರು ಒರಸಿ..

"ಸಾರ್.. ಸಾರ್.. ನಾನು ತುಳುವನಾದರೂ ನಾನೀಗ ಹೆಮ್ಮೆಯ ಕನ್ನಡಿಗನೇ.. ಈ ಕರ್ನಾಟಕ ದೇಶದಲ್ಲಿ ಕನ್ನಡಿಗನೇ ಸರ್ವಾಧಿಕಾರಿ, ಇದರಲ್ಲಿ ಎರಡು ಮಾತಿಲ್ಲ. ದಯವಿಟ್ಟು ಯಾರಿಗೂ ಬೇಡದ ಬಾಷೆಯಾದ ತುಳುವನೆಂದು ಕರೆದು ನಿಮ್ಮಿಂದ ದೂರ ಮಾಡಬೇಡಿ.. ಹಾಗೆ ಕರೆದು ಅವಮಾನ ಮಾಡಬೇಡಿ ಹಾಗು ಇದರಿಂದ ಸರಕಾರದ ಯಾವುದೇ ಸೌಲಭ್ಯಗಳು ಸಿಗದು.. ಪ್ಲೀಸ್.. ಸರ್..

ಸಂದರ್ಶಕ - ಚೆ, ಚೇ.. ನೀವು ಏನು ಭಯ ಪಡಬೇಡಿ, ನಿಮ್ಮ ಹೆಸರು ಹಾಗು ವಿಳಾಸವನ್ನು ನಾವು ಬಹಿರಂಗ ಪಡಿಸುವುದಿಲ್ಲ.. ನೀವು ತುಳುವನಾದರೂ ಕನ್ನಡಿಗನೇ.. ಅದರಲ್ಲಿ ಎರಡು ಮಾತಿಲ್ಲ! ರಾಜ್ಯಾವಾರು ರಚನೆಯಾದ ಮರು ದಿನವೇ ನಿಮ್ಮ ಭಾಷೆ ನಾಶ ಎನ್ನುವ ಕಲ್ಪನೆ ಇಲ್ಲದ ನೀವು ಹೇಗೆ ಬುದ್ಧಿವಂತರ ಜಿಲ್ಲೆಯರು ಸ್ವಾಮಿ.. 😄 😄 😄  ಸುಮಾರು 40 ವರ್ಷದ ಹಿಂದೆ ತುಳುನಾಡಿನಲ್ಲಿ ಸುಮಾರು 80% ಜನರಿಗೆ ತುಳು ಬರುತ್ತಿತ್ತು ಅಂತೆ.. ಅದು ನಾಶವಾಗಿ ನಿಮ್ಮ ಒಂದೇ ಕುಟುಂಬ ಉಳಿದಿದೆ ಎಂದು ಸರಕಾರದ ರಿಪೋರ್ಟ್ ಹೇಳುತ್ತದೆ. ಹಾಗು ಆ ಬಾಷೆಯ ನಾಶಕ್ಕೆ ತುಳುವರು ಕಾರಣ ಹೊರತು ಆಡಳಿತ ಮಾಡುವ ಯಾವುದೇ ಸರಕಾರವಲ್ಲ ಎಂದು ಹೇಳಿದೆ! ಆದರೂ....

ಪ್ರಶ್ನೆ -2 ಓಕೆ, ನೀವು ನಿಮ್ಮ ಮನೆಯಲ್ಲಿ ಅಲ್ಲದೇ ಕುಟುಂಬದ ಬೇರೆಯವರಲ್ಲಿ ತುಳುವಿನಲ್ಲಿ ವ್ಯವಹಾರ ಮಾಡಿದ ನೆನಪಿದೆಯಾ? ಕರ್ನಾಟಕ ಸರಕಾರ ಕನ್ನಡದ ಉಳಿವಿಗಾಗಿ ಹಾಗು ಅದರ ಬೆಳವಣಿಗೆಗಾಗಿ ಎಷ್ಟೇ ಕಾನೂನು ತಂದರೂ ಅದರ ಪರಿಣಾಮ ನಿಮ್ಮ ಕುಟುಂಬದ ಮೇಲೆ ಯಾಕೆ ಬೀರಲಿಲ್ಲ ಎನ್ನುವುದು ಆಶ್ಚರ್ಯವೆ? ಅದವಾ ನಿಮಗೆ ಕಾನೂನಿನ ಅರವಿಲ್ಲವಾ?

ಕಟ್ಟ ಕಡೆಯ ತುಳುವ -  ಸರ್ ನನ್ನ ಮನೆ ಇರುವುದು ಪುತ್ತೂರು ಹಾಗು ಸುಳ್ಯದ ದಟ್ಟ ಕಾಡಿನ ಒಳಗೆ ನಾವೇ ನಾಡಿಗೆ ಬರಲು ಕಷ್ಟ ಪಡುತ್ತೇವೆ, ಇನ್ನೂ ಸರಕಾರದ ಜನರು ಈ ಬಡ ತುಳುವನಿಗೋಸ್ಕರ ಯಾಕೆ ಬರಬೇಕು?
ಇನ್ನು ನಾವು ಪೇಟೆಗೆ ಹೋದರೆ ಯಾರಲ್ಲಿ ತುಳು ಮಾತಾಡಲಿ  ಹೇಳಿ? ಇನ್ನು ನಾನು ತುಳು ಮಾತಾಡಿದರೆ ಕನ್ನಡ ಸಂಘ ಸಂಸ್ಥೆಗಳ ಸಹಾಯದಿಂದ ಈ ಸರಕಾರ ಯಾವುದಾದರೂ ಕೇಸ್ ಜಡಿದು ಜೈಲಿಗೆ ಕಳಿಸುತ್ತಾರೆ ಎನ್ನುವ ಸತ್ಯ ಗೊತ್ತಿದೆ ಸರ್.. 😳

ಸಂದರ್ಶಕ - ಆಯಿತು ನಿಮ್ಮ ಮಾತು ಇಲ್ಲಿ ಯಾರು ಕೇಳುವುದಿಲ್ಲ ಹಃ ಹಃ.. ನಮ್ಮ ಮಾತನ್ನು ಆಮೇಲೆ ಆಲಿಸುತ್ತೇವೆ. ನಮ್ಮ ಜೊತೆಯಲ್ಲಿ ಕನ್ನಡ ಸರಕಾರದ ಎಮ್ಮೆಯ ಮುಖ್ಯಮಂತ್ರಿ ಹಾಗು ರಕ್ಷಣಾವೇದಿಕೆಯ ಅಧ್ಯಕ್ಷರಾದ ಮಾನ್ಯ ಚೀ. ರೆ.ಬ್ಯಾ ಗೌಡರು ಇದ್ದಾರೆ.

ಸರ್...  ನೀವು ನಿಮ್ಮ ಜೀವಿತವನ್ನು ಕನ್ನಡಕೊಸ್ಕರ ಮುಡಿಪಾಗಿಟ್ಟಿದ್ದೀರ? ಕನ್ನಡಕೊಸ್ಕರ ಹವಾಯಿ ಚಪ್ಪಲಿ ಹಾಕಿ ಬೆಂಗಳೂರಿಗೆ ಕೆಂಪು ಬಸ್ ಹತ್ತಿ ಬಂದು ಅನ್ಯ ಬಾಷೆಯ ಧ್ವನಿಯನ್ನು ಅಡಿಗಿಸಿದ್ದೀರಿ, ನಿಮ್ಮ ಸಂಘಟನೆಯಿಂದಲೆ ತುಳುನಾಡಿನಲ್ಲಿ ತುಳು ಹಾವಳಿಯನ್ನು ಕಡಿಮೆ ಮಾಡಿದ ಇಂತಹ ಅದ್ಭುತ, ಕ್ರಾಂತಿಕಾರಿ ಕೆಲಸವನ್ನು ನಿಮ್ಮ ಸಂಘಟನೆಗೆ ಸಲ್ಲುತ್ತದೆ, ಅದಕ್ಕೆ ಅಭಿನಂದನೆಗಳು ಹಾಗು ನಿಮ್ಮ ಪಕ್ಷವು ಇಂತಹ ಒಳ್ಳೆಯ ಕೆಲಸವನ್ನು ಹೇಗೆ ಮಾಡಿದ್ದೀರಿ? ಆದರೆ ಇನ್ನೂ ನಮ್ಮ ರಾಜ್ಯದಲ್ಲಿ ಇಂತಹ ಕನ್ನಡ ವಿರೋಧಿಗಳು ನಿಮ್ಮ ಕಣ್ಣಿಗೆ ಬೀಳದೆ ತುಳು ಪರವಾಗಿ ಕೆಲಸ ಮಾಡುವವರು ಉಳುಕೊಂಡಿದ್ದಾರೆ ಅಂದರೆ ಇದು ನಿಮ್ಮ ವೈಫಲ್ಯ ಅನಿಸುದಿಲ್ಲವಾ?

ಮುಖ್ಯಮಂತಿ- ಚೀ.ರ.ಬ್ಯಾ - ನಾನು ರಾಜ್ಯಕೀಯಕ್ಕೆ ಬರುವ ಮೊದಲು ಮಾಡದ ಕೆಲಸವೆಂದರೆ ಹಿಂದಿ ನಿಷೇಧ ಹಾಗು  ಅಲ್ಲಿನ ಪ್ರಬಲವಾದ ರಕ್ಷಣಾವೇದಿಕೆಯನ್ನು ನಮ್ಮ ಸಂಘಟನೆಯ ಜೊತೆ ಸೇರಿಸಿ ಅಲ್ಲಿನ ಜನರನ್ನು ಕನ್ನಡಿಕರಣ ಮಾಡಿದ್ದು, ಈಗ ಅವರು ನಮ್ಮ ಸಂಪುಟದ ಮಂತ್ರಿಯಾಗಿದ್ದಾರೆ..
ಇನ್ನು ನಾವು ಅಧಿಕಾರ ಬಂದ ಮೇಲೆ ಅಲ್ಲಿನ ಇನ್ನೊಂದು ಸಂಘಟನೆಯ ಜನರನ್ನು ರಾಜ್ಯ ದ್ರೋಹದ ಅಡಿಯಲ್ಲಿ ಅನೇಕ ಕೇಸ್ ಹಾಕಿ ಜೈಲಲ್ಲಿ ಕಂಬಿ ಎಣಿಸುತ್ತಿದ್ದಾರೆ..ಈಗ ಎಲ್ಲಿದೆ ತುಳುನಾಡು? ನಮ್ಮ ಅಜೆಂಡ ಒಂದೇ ಒಂದು ರಾಜ್ಯ ಒಂದು ಬಾಷೆ! ಅದರಲ್ಲಿ ನಾವು ಯಶಸ್ವಿಯಾಗಿದ್ದೇವೆ ಅನಿಸುತ್ತದೆ.. ಕನ್ನಡ ಬಾಷೆಯ ಬಗೆ ಅನ್ಯಾಯ ಅದಾಗ ಪ್ರತ್ಯೇಕ ದೇಶಕ್ಕಾಗಿ ಹೋರಾಟವನ್ನು ಮಾಡಿದ್ದೇವೆ, ಇದು ತಪ್ಪಲ್ಲ,

ಸಂದರ್ಶಕ - ಅದಕ್ಕಿಂತ ನೀವು ತುಳುನಾಡಿನ ಸಂಸ್ಕೃತಿ ಎಂದು ಜನರಲ್ಲಿ ಮೂಡನಂಬಿಕೆಯಾದ ಭೂತರಾದನೆ, ನೇಮ, ಅಗೆಲು, ಕೊಲ ಮುಂತಾದವುಗಳನ್ನು ಅನೇಕ ಕಾನೂನು ತಂದು ನಿಷೇಧ ಮಾಡಿದ್ದು, ಇದರ ಬಗೆ ಹೆಮ್ಮೆ ಎನಿಸುತ್ತದೆ, ಸರಿಯಾಗಿ ನೋಡಿದರೆ ತುಳುವರದ್ದು ಎನ್ನುವುದು ಯಾವುದು ಇಲ್ಲ,

ಕಟ್ಟ ಕಡೆಯ ತುಳುವ - ಮಾನ್ಯ ಮುಖ್ಯಮಂತ್ರಿಗಳೆ ನನ್ನದು ಒಂದು ಕೋರಿಕೆ ಇದೆ. ನಿಮ್ಮ ಕಾಲು ಇಡಿದು ಬೇಡಿ ಕೊಳ್ಳುತ್ತೇನೆ.. ದಯವಿಟ್ಟು ಅದರ ಬಗೆ ಒಮ್ಮೆ ಗಮನ ಕೊಡಿ.

ಮುಖ್ಯಮಂತಿ- ಚೀ.ರ.ಬ್ಯಾ - ಏನೋ ನಿನ್ನ ಗೋಳು? ನೋಡೋಣ ಕನ್ನಡಿಗರು ಒಪ್ಪಿದರೆ ಚಿಂತಿಸೊಣ.

ಕಟ್ಟ ಕಡೆಯ ತುಳುವ - ಮಾನ್ಯ ಮುಖ್ಯಮಂತ್ರಿಗಳೆ ನಾವು ತುಳು ಭಾಷೆಯನ್ನು ಸವೀಂಧಾನ 8 ನೇ ಪರಿಚ್ಛೇದಕ್ಕೆ ಸೇರಿಸುವ ಬಗೆ ಸುಮಾರು 80 ವರ್ಷಗಳಿಂದ ಹೋರಾಟ ಮಾಡುತ್ತಿದ್ದೇವೆ, ಫಲಿತಾಂಶ ಸೊನ್ನೆ. ಬಗೆ ಕೇಂದ್ರ ಸರಕಾರಕ್ಕೆ ಮನವಿ ಸಲಿಸಿ ನಮ್ಮ ಭಾಷೆಯನ್ನು ಉಳಿಸಬೇಕು, ಹಾಗು ಇನ್ನೊಂದು ಮನವಿ ತುಳು ಭಾಷೆಯನ್ನು ಕರ್ನಾಟಕದ ಅಧಿಕೃತ ಹಾಗು ಎರಡನೆಯ ಭಾಷೆಯಾಗಿ....

ಅವನ ಮಾತನ್ನು ತುಂಡರಿಸಿ ಕೆಂಡಮಂಡಲವಾದ ಮುಖ್ಯಮಂತ್ರಿಯು ಕಟ್ಟ ಕಡೆಯ ತುಳುವನಿಗೆ ನಿನಗೆ ಇಲ್ಲಿ ಸಂದರ್ಶನ ಮಾಡಲು ಬಿಟ್ಟಿದ್ದೇ ತಪ್ಪು.. ಇನ್ನೂ ಬೆರಳೆಣಿಕೆಯ ಜನ ಇರುವ ನಿನ್ನ ಭಾಷೆಯನ್ನು ರಾಜ್ಯದ ಅಧಿಕೃತ ಭಾಷೆಯಾಗಿ ಮಾಡಬೇಕಾ? ಇದು ಅತಿಯಾದ ಬೇಡಿಕೆ ಅನಿಸುವುದಿಲ್ಲವಾ?
ಇನ್ನೂ ಸವಿಂಧಾನದ 8ನೇ ಪರಿಚ್ಛೇದದ ಬಗೆ ಕೇಂದ್ರ ಸರಕಾರಕ್ಕೆ ನೀನು ಮನವಿ ಸಲಿಸಬೇಕಾಗಿರುವುದು ನೀವು ಕನ್ನಡಿಗರು ಅಲ್ಲ, ಏನಾದರು ಕೇಂದ್ರದಲ್ಲಿ ನಮ್ಮ ಕನ್ನಡ ಸರಕಾರ ಅಧಿಕಾರಕ್ಕೆ ಬಂದರೆ ನಿನ್ನ ಬೇಡಿಕೆಯನ್ನು ಪೂರೈಸುತ್ತೇವೆ, ಈಗ ಉಳಿದಿರುವ ಬೆಳಣಿಕೆಯ ತುಳುವರನ್ನು ಕರೆದುಕೊಂಡು ದೆಹಲಿಗೆ ಬೇಡಿಕೆ ಸಲೀಸು, ನಾವು ಬಾಹ್ಯ ಬೆಂಬಲವಾಗಿ ನಿಲ್ಲುತ್ತವೆ..

ಸಂದರ್ಶಕ - ನಿಮಗೆ ಇಷ್ಟು ಭರವಸೆ ಯಾರು ಕೊಡುವುದಿಲ್ಲ,   ಸಂತೋಷದಿಂದ ನೀವು ಊರಿಗೆ ಮರಳಬಹುದು.. ಕೊನೆಯದಾಗಿ ನಿಮಗೆ ಗೊತ್ತಿರುವ ಒಂದು ತುಳು ವಾಕ್ಯ ಹೇಳಿ?

ಕಟ್ಟ ಕಡೆಯ ತುಳುವ - ಕೈ ಮುಗಿದು  "ಅಣ್ಣಾ ಎನ್ನನ್ ಬುಡ್ಲೆ ಊರುಡ್ ನಾಲ್ ನುಪ್ಪು ತಿನ್ತ್ ಬದುಕೊನುವೆ"...

ಸಂದರ್ಶಕ - ಕೋಪದಿಂದ, ಇವರು ಮಾತಿನ ಅರ್ಥ ಆ ದೇವರಿಗೆ ಗೊತ್ತು.. ಕನ್ನಡದ ಬಗೆ ಬೈದ ರೀತಿಯಲ್ಲಿ ಇದೆ, ಇದರ ಬಗೆ ಇನ್ನಷ್ಟು ಕೇಳುವ ಮೊದಲು ಒಂದು ಕಮರ್ಷಿಯಲ್ ಬ್ರೇಕ್....

(ಭಾಗ ಒಂದು ಮುಂದುವರಿಯುತ್ತದೆ)

ರಿಪೋರ್ಟರ್ - ಮಾಜಿ ತುಳುವೇ ..
Copy post

Monday, 17 July 2017

ಸದಾಶಿವ ಬ್ರಹ್ಮಾವರ

ಸದಾಶಿವ ಬ್ರಹ್ಮಾವರ
ಉಡುಪಿ ಜಿಲ್ಲೆಯ ಬ್ರಹ್ಮಾವರದ ಬಡ ಮನೆತನದಲ್ಲಿ ಹುಟ್ಟಿದ ಬಾಲಕ ಸದಾಶಿವ ಬ್ರಹ್ಮವಾರ ಅನಿವಾರ್ಯವಾಗಿ ರಂಗಭೂಮಿಯ ವಿಂಗಿನಲ್ಲಿ ಬೆಳೆಯಬೇಕಾಗಿ ಬಂತು. ಅಲ್ಲಿ ಪರದೆ ಹಿಡಿಯುವುದರಿಂದ ಹಿಡಿದು ಪೋಷಕ ಪಾತ್ರಗಳನ್ನು ವಹಿಸುವಲ್ಲಿಯವರೆ
ಗಿನ ಎಲ್ಲ ಕೆಲಸಗಳನ್ನೂ ಕರಗತ ಮಾಡಿಕೊಂಡರು.


”ನನಗೆಲ್ಲ ಗೊತ್ತು,” ಎಂದು ಯಾವತ್ತೂ ಗರ್ವ ತೋರದೇ, ಸರ್ವರೊಳಗೊಂದಾಗಿ ಬೆರೆತರು. ಅನ್ನವಿಕ್ಕಿ, ಆಶ್ರಯವಿತ್ತು, ಆತ್ಮೀಯತೆಯಿಂದ ನೋಡಿಕೊಂಡ ಎಲ್ಲರ ಬಗ್ಗೆಯೂ ಅವರಿಗೆ ಗೌರವ, ವಿನೀತಭಾವ.

ತಮ್ಮ ಹದಿನೈದನೆಯ ವರ್ಷದಿಂದಲೇ ಕಲಾಭೂಷಣ ಏಣಗಿ ಬಾಳಪ್ಪನವರ ‘ಕಲಾವೈಭವ ನಾಟ್ಯ ಸಂಘ’ದಲ್ಲಿ ಕೆಲಸ ಮಾಡತೊಡಗಿದ ಸದಾಶಿವ, ಊರಿನ ಹೆಸರನ್ನೇ ಅಡ್ಡ ಹೆಸರನ್ನಾಗಿ ಇಟ್ಟುಕೊಂಡರು. ಸದಾಶಿವ ಬ್ರಹ್ಮಾವರರನ್ನು ಇವತ್ತಿಗೂ ಶತಾಯುಷಿ ಏಣಗಿ ಬಾಳಪ್ಪನವರು ಪುತ್ರವಾತ್ಸಲ್ಯದಿಂದಲೇ ಕಾಣುತ್ತಾರೆ. ಇವರೂ ಅಷ್ಟೇ ; ಬಾಳಪ್ಪನವರನ್ನು ‘ಮಾಲಿಕರೆಂದೇ’ ಕರೆಯುತ್ತಾರೆ.

ಕಲಾವೈಭವ ನಾಟ್ಯ ಸಂಘ’ ಮುಚ್ಚಿದ ಮೇಲೆ ಬೇರೆ ಬೇರೆ ನಾಟಕ ಕಂಪನಿಗಳಲ್ಲಿ ಕೆಲಸ ಮಾಡಿದ ಸದಾಶಿವ ಬ್ರಹ್ಮಾವರ ಅವರು ಗಾಂಧೀ ನಗರದ ನಿರ್ಮಾಪಕರ ಕಣ್ಣಿಗೆ ಬಿದ್ದರು. ಆಗಿನಿಂದ ಈ ತನಕ ಏನಿಲ್ಲೆಂದರೂ ಇನ್ನೂರು ಕನ್ನಡ ಸಿನಿಮಾಗಳಲ್ಲಿ ತಂದೆ, ತಾತ, ಮನೆಯಾಳು, ಶಾಲಾ ಶಿಕ್ಷಕ ಹೀಗೆ ಪೋಷಕ ಪಾತ್ರಗಳಲ್ಲೇ ಕಾಣಿಸಿಕೊಳ್ಳುತ್ತ, ಕನ್ನಡ ಚಿತ್ರ ರಸಿಕರ ಮನದಲ್ಲಿ ಆತ್ಮೀಯರಾಗಿ ಕೂತವರು. ಯಾವುದೇ ದುಶ್ಚಟಗಳಿಗೆ ಬಲಿಯಾಗದೇ, ಆರೋಗ್ಯವನ್ನು ಕಾಪಾಡಿಕೊಂಡು ಬಂದಿರುವ ಸದಾಶಿವ ಬ್ರಹ್ಮಾವರ ಅವರೊಂದಿಗೆ ಮಾತಾಡುವುದೇ ಒಂದು ಆನಂದದ ಅನುಭವ ನೀಡುತ್ತದೆ.

ಇಂಥ ಸ್ವಾಭಿಮಾನಿ ಹಿರಿಯರಿಗೆ 2015ರ ‘ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ’ ದೊರೆತಿರುವುದು ಆ ಪ್ರಶಸ್ತಿಗೆ ನಿಜಕ್ಕೂ ಬೆಲೆ ಬಂದಂತಾಗಿದೆ.

ರಂಗಭೂಮಿಯ ನಡೆದಾಡುವ ವಿಶ್ವಕೊಶವೇ ಆಗಿರುವ ಸದಾಶಿವ ಬ್ರಹ್ಮಾವರ ಅವರಿಗೆ ಈ ಮೂಲಕ ನನ್ನ ಅಭಿನಂದನೆಗಳು.💐

#copyPaste