Friday, 8 September 2017

ನವೆಂಬರ್ ಒಂದರಂದು ಕರಾಳ ದಿನದ ಎಚ್ಚರಿಕೆ

*ನವೆಂಬರ್ ಒಂದರಂದು ಕರಾಳ ದಿನದ ಎಚ್ಚರಿಕೆ*



ನವೆಂಬರ್ ಒಂದರೊಳಗೆ ತುಳು ಭಾಷೆಯನ್ನು ಸಂವಿಧಾನಕ್ಕೆ ಸೇರಿಸಲು ರಾಜ್ಯ ಸರಕಾರ ಕಂಬಳಕ್ಕೆ ಮಾಡಿದ ಹಾಗೆ *ವಿಶೇಷ ಅಧಿವೇಶನ* ಕರೆದು ತುಳು ಭಾಷೆಯನ್ನು ರಾಜ್ಯದ *ಅಧಿಕೃತ ಭಾಷೆ* ಎಂದು ಅಂಗೀಕರಿಸಿ ಕೇಂದ್ರ ಸರಕಾರಕ್ಕೆ ಸಂವಿಧಾನಕ್ಕೆ ಸೇರಿಸಲು ಒತ್ತಡ ಹೇರಬೇಕು

ಇಲ್ಲದೇ ಹೋದಲ್ಲಿ *ನವೆಂಬರ್ ಒಂದ*ರಂದು ತುಳುನಾಡಿದ್ಯಾಂತ *ಕರಾಳ ದಿನ*ವಾಗಿ ಆಚರಿಸಲಾಗುವುದು ಮತ್ತು ಕರಾಳದಿನದ ಅಂಗವಾಗಿ *ನವೆಂಬರ್ ಒಂದು* ತಾರೀಕಿನಂದು #BlackDayForTulunad ಎಂಬ ಹ್ಯಾಶ್ ಟ್ಯಾಗ್ ಮೂಲಕ *ಬೃಹತ್ ಟ್ವೀಟರ್ ಅಭಿಯಾನ* ಮಾಡಿ ರಾಜ್ಯದ ಮಲತಾಯಿ ಧೋರಣೆ ವಿರುದ್ಧ ಪ್ರತಿಭಟಿಸುವ ಮತ್ತು ಎರಡು ರಾಜ್ಯಕ್ಕೆ ಹಂಚಿಹೋದ *ತುಳುನಾಡನ್ನು ಏಕೀಕರಣ*ಗೊಳಿಸುವ ಚಳುವಳಿಯ ಭಾಗವಾಗಿ *ಕರಾಳದಿನ* ಆಚರಿಸುವ ನಿರ್ಣಯವನ್ನು ತುಳು ಸಂಘಟನೆಗಳ ಒಕ್ಕೂಟವಾದ *ತುಳುನಾಡು ಏಕೀಕರಣ ಸಮಿತಿ*ಯು ತೆಗೆದುಕೊಂಡಿದೆ

ಮನವಿ ಕೊಟ್ಟು ಕೊಟ್ಟು ತುಳುನಾಡಿಗೇ  ತುಳುನಾಡೇ ಸುಸ್ತಾಗಿದೆ.
ಇನ್ನು ಮನವಿಯ ಮಾತಿಲ್ಲ.
*ಫಲಿತಾಂಶದ ಮಾತಷ್ಟೇ.*

ಜೈ ತುಳುನಾಡ್

Wednesday, 19 July 2017

ಆಟಿ ತಿಂಗೊಳುಡು ಪೊಸ ಮದಿಮಲ್ ಆಟಿ ಕುಲ್ಲುನ ಕ್ರಮ ದಾಯೆ..?

ಆಟಿ ತಿಂಗೊಳುಡು ಪೊಸ ಮದಿಮಲ್ ಆಟಿ ಕುಲ್ಲುನ ಕ್ರಮ : ಪೊಸ ಮದಿಮಲ್ ಆಟಿ ಕುಲ್ಲುನ ಕ್ರಮ ದಾಯೆ..?

ಆ ಕಲೋಡ್ ಆಟಿ ಬಾರಿ ಕಡು ಕಷ್ಟದ ತಿಂಗೊಲು. ಆತಿ ತಿಂಗೊಳುಡು ಕಂಡ - ತೋಟದ ಕೆಲಸ ಕಡಿಮೆ. ಪೊಸ ಮದಿಮಾಯೆ ಮದಿಮಾಲ್ ಆಟಿ ತಿಂಗೊಳುಡು ಒಟ್ಟಿಗುಪ್ಪೆರೆ ಬಲ್ಲಿ ಪನ್ಪಿನ ನಂಬಿಕೆ ಉಂಡು.ಅಂಚಾದ್ ಆಟಿ ಸುರುವಾಯಿವೆಟ್ಟಿಗೆ ಪೊಣ್ಣನ ಅಪ್ಪೆ ಅಮ್ಮೆ ಬತ್ತ್ದ್ ಮದ್ಮಲೆನ್ ತಮೆರಿಗ್ ಲೆತೊಂದು ಪೋಪಿನ ಕ್ರಮ ಉಂಡು.ಆಟಿಡ್ ಪೊಣ್ಣು ಬಂಜ್ಯೊತ್ತೆರೆ ಬಲ್ಲಿಗೆ. ಆಟಿಡ್ ಬಿತ್ತ್ ಬಿತ್ತುಜೆರ್,ದಯಿ ನಡ್ಪುಜೆರ್,ಏಣೆಲ್ ಬೆನ್ನಿ ಆಟಿಗ್ ದುಂಬೇ ಮುಗಿಪ್ಪುನ ರೂಢಿ.ಈ ಪದ್ಧತಿ ತಮಿಳುನಾಡ್ಡ್ಲ ಉಂಡು.ಅಕುಲು ಆಟಿಗ್ 'ಆಡಿ' ಪನ್ಪೆರ್.

ಆಟಿಡ್ಬಂ ಜ್ಯೊತ್ತಿನಾಲ್ ಸುಗ್ಗಿಡ್ ಪೆದ್ದ್ಬಲ್.ಸುಗ್ಗಿ ಅಗ್ಗಿದ ತಿಂಗೊಲು.ಸುಗ್ಗಿದ ಬಾಲೆ ಬದುಕುನ ಕಷ್ಟ ಪನ್ಪಿನ ನಂಬಿಕೆ ಆ ಕಾಲೊಡಿತ್ತ್ಂಡ್.ಅಂಚಾದೆ ಪೊಸ ಮದಿಮಲ್ ಆಟಿ ಕುಲ್ಲುನ ಕ್ರಮ ಸುರುವಾಂಡ್.ಆಟಿ ಕುಲ್ಲುನ ರಿವಾಜ್ ಚಾಮರಾಜನಗರ ಜಿಲ್ಲೆಡ್ಲ ಉಂಡು.ಆ ಜಿಲ್ಲೆದ ದೇವಸ್ಥಾನೊಡು ಒಂಜಿ ಮಲ್ಲ ಉಚ್ಚಯ ಆಪುಂಡು.ಆನಿ ಮಾತ್ರ ಪೊಸ ಕಂಡನಿ ಬುಡೆದಿ ಒಟ್ಟು ಸೇರ್ದ್ಪಾ ತೆರೊಲಿ.ಅಕುಲು ಚಾಂದ್ರಮಾನ ಪದ್ಧತಿದಕುಲು.ಆಟಿನ್ ಆಷಾಢ ಪನ್ಪೆರ್. ಕರ್ನಾಟಕೊದ ಬಾಕಿ ಕೋಡಿಡ್ಲ ಆಷಾಢ ತಿಂಗೊಲು ಪಂಡಾ ಅನಿಷ್ಟೊದ ತಿಂಗೊಲು.
Courtesy : © Beauty of Tulunad | (ರೆಫರೆನ್ಸ್: ಪಾಲ್ತಾಡಿ ರಾಮಕೃಷ್ಣ ಆಚಾರ್,ಪುತ್ತೂರು)

...spb...

Tuesday, 18 July 2017

ಸ್ವಾಭಿಮಾನಿ ಕನ್ನಡಿಗರು

ಕಾಲ್ಪನಿಕ ಸತ್ಯ 😄

ವರ್ಷ 21/04/2060

ಚಾನೆಲ್ - ಸ್ವಾಭಿಮಾನಿ ಕನ್ನಡಿಗರು

ಕನ್ನಡ ರಾಜ್ಯದ ಪ್ರಸಿದ್ಧ ಟಿವಿ ಚಾನೆಲ್ ಲಾದ "ಸ್ವಾಭಿಮಾನಿ ಕನ್ನಡಿಗರು" ದಲ್ಲಿ ವಿಶೇಷವಾಗಿ ಬಿತ್ತರವಾದ "ಕಟ್ಟ ಕಡೆಯ ತುಳುವ" ಕಾರ್ಯಕ್ರಮದ ಎಂಬುದರ ಒಂದು ಭಾಗ - 1

ಸಂದರ್ಶಕ - ಸರ್, ನಿಮ್ಮನ್ನು ಸಂದರ್ಶನ ಮಾಡುವುದು ನಮಗೆ ಗೌರವ ಹಾಗು ಅಷ್ಟೇ ಸಂತೋಷದ ವಿಷಯ ವಿಷಯ, ಈ ಅಖಂಡ ಕರ್ನಾಟಕದಲ್ಲಿ ಸ್ಪಷ್ಟವಾಗಿ ತುಳು ಮಾತಾಡುವ ಒಬ್ಬ ಇನ್ನೂ ಉಳಿದಿದ್ದಾರೆ ಎಂದರೆ ನಿಮ್ಮ ಬಗೆ ಹಾಗು ಈ ರಾಜ್ಯದ ಬಗೆ ಹೆಮ್ಮೆಯಾಗುತ್ತಿದೆ ಹಾಗು ಅಷ್ಟೇ ಆಶ್ಚರ್ಯವಾಗುತ್ತಿದೆ! ನಮ್ಮದು ಕನ್ನಡ ರಾಜ್ಯವಾದರೂ ಇಲ್ಲಿನ ಇರುವ ಎಲ್ಲಾ ಚಿಕ್ಕ ಚಿಕ್ಕ ಭಾಷೆಗಳಿಗೂ ನಾವು ಬೆಲೆ ಕೊಡುತ್ತವೆ, ಗೌರವಿಸುತ್ತೇವೆ, ಅದರ ಉದ್ಧಾರಕ್ಕಾಗಿ ಶ್ರಮ ಕೊಡುತ್ತವೆ, ಅದರ ಬಗೆ ಕಾಳಜಿ ಇದ್ದೇ ಇದೆ. ಆದರೆ ಸರಕಾರ ಹಾಗು ಕನ್ನಡಿಗರು ತುಳು ಬಾಷೆಯ ಉಳಿವಿಗಾಗಿ ಎಷ್ಟೇ ಪ್ರೋತ್ಸಾಹ ಕೊಟ್ಟರೂ ಈ ರಾಜ್ಯದ ಬಾಷೆ ನಾಶವಾಗಲು ಕಾರಣ ನೀವೇ ಹೊರತು ಕನ್ನಡವಲ್ಲ, ಇದು ಈಗ ಇತಿಹಾಸ,

ಮೊದಲನೆಯ ಪ್ರಶ್ನೆ - ಈ ರಾಜ್ಯದಲ್ಲಿ ಆಡಳಿತ ಬಾಷೆ ಹಾಗು ಎಲ್ಲಾ ವ್ಯವಹಾರಗಳು ಕನ್ನಡದಲ್ಲಿ ಇರುವಾಗ ನೀವು ನಿಮ್ಮ ಮನೆಯಲ್ಲಿ  ಮನೆಯವರ ಜೊತೆಗೆ ತುಳುವಿನಲ್ಲಿ ವ್ಯವಹಾರ ಮಾಡುತ್ತೀರಿ ಎಂದು ಕೇಳಿದ್ದೆ! ಇದು ಸತ್ಯನಾ ಸರ್.. ಮಾತಾಡಿ ಆದರೆ ಇದು ಸವಿಂಧಾನದ 645 ಕಾಲಂನ ಪ್ರಕಾರ ಇದು ರಾಜ್ಯ ದ್ರೋಹ ಅನಿಸುವುದಿಲ್ವಾ? ನಿಮ್ಮನು ರಾಜ್ಯ ದ್ರೋಹದ ಬಗೆ ಜೈಲಿಗೆ ಹಾಕಬಾರದು? ಅಲ್ಲದೆ ನಾನು ಕನ್ನಡಿಗ ಅಲ್ಲ ತುಳುವ ಎಂದು ಹೇಳಿಕೆ ಕೊಟ್ಟ ವಿಷಯ ಬಹಿರಂಗವಾಗಿದೆ.

ಅಷ್ಟೊತ್ತು ನಾನು ಈ ಪ್ರಪಂಚದಲ್ಲಿ ಇರುವ ಒಬ್ಬನೇ ಒಬ್ಬ ತುಳುವ ಎಂದು ಜಂಭ ಕೊಚ್ಚುತ್ತಿದ್ದ ಆ ಕಟ್ಟ ಕಡೆಯ ತುಳುವ ಭಯದಿಂದ ಕರ್ಚೀಫಿನಿಂದ ಬೆವರು ಒರಸಿ..

"ಸಾರ್.. ಸಾರ್.. ನಾನು ತುಳುವನಾದರೂ ನಾನೀಗ ಹೆಮ್ಮೆಯ ಕನ್ನಡಿಗನೇ.. ಈ ಕರ್ನಾಟಕ ದೇಶದಲ್ಲಿ ಕನ್ನಡಿಗನೇ ಸರ್ವಾಧಿಕಾರಿ, ಇದರಲ್ಲಿ ಎರಡು ಮಾತಿಲ್ಲ. ದಯವಿಟ್ಟು ಯಾರಿಗೂ ಬೇಡದ ಬಾಷೆಯಾದ ತುಳುವನೆಂದು ಕರೆದು ನಿಮ್ಮಿಂದ ದೂರ ಮಾಡಬೇಡಿ.. ಹಾಗೆ ಕರೆದು ಅವಮಾನ ಮಾಡಬೇಡಿ ಹಾಗು ಇದರಿಂದ ಸರಕಾರದ ಯಾವುದೇ ಸೌಲಭ್ಯಗಳು ಸಿಗದು.. ಪ್ಲೀಸ್.. ಸರ್..

ಸಂದರ್ಶಕ - ಚೆ, ಚೇ.. ನೀವು ಏನು ಭಯ ಪಡಬೇಡಿ, ನಿಮ್ಮ ಹೆಸರು ಹಾಗು ವಿಳಾಸವನ್ನು ನಾವು ಬಹಿರಂಗ ಪಡಿಸುವುದಿಲ್ಲ.. ನೀವು ತುಳುವನಾದರೂ ಕನ್ನಡಿಗನೇ.. ಅದರಲ್ಲಿ ಎರಡು ಮಾತಿಲ್ಲ! ರಾಜ್ಯಾವಾರು ರಚನೆಯಾದ ಮರು ದಿನವೇ ನಿಮ್ಮ ಭಾಷೆ ನಾಶ ಎನ್ನುವ ಕಲ್ಪನೆ ಇಲ್ಲದ ನೀವು ಹೇಗೆ ಬುದ್ಧಿವಂತರ ಜಿಲ್ಲೆಯರು ಸ್ವಾಮಿ.. 😄 😄 😄  ಸುಮಾರು 40 ವರ್ಷದ ಹಿಂದೆ ತುಳುನಾಡಿನಲ್ಲಿ ಸುಮಾರು 80% ಜನರಿಗೆ ತುಳು ಬರುತ್ತಿತ್ತು ಅಂತೆ.. ಅದು ನಾಶವಾಗಿ ನಿಮ್ಮ ಒಂದೇ ಕುಟುಂಬ ಉಳಿದಿದೆ ಎಂದು ಸರಕಾರದ ರಿಪೋರ್ಟ್ ಹೇಳುತ್ತದೆ. ಹಾಗು ಆ ಬಾಷೆಯ ನಾಶಕ್ಕೆ ತುಳುವರು ಕಾರಣ ಹೊರತು ಆಡಳಿತ ಮಾಡುವ ಯಾವುದೇ ಸರಕಾರವಲ್ಲ ಎಂದು ಹೇಳಿದೆ! ಆದರೂ....

ಪ್ರಶ್ನೆ -2 ಓಕೆ, ನೀವು ನಿಮ್ಮ ಮನೆಯಲ್ಲಿ ಅಲ್ಲದೇ ಕುಟುಂಬದ ಬೇರೆಯವರಲ್ಲಿ ತುಳುವಿನಲ್ಲಿ ವ್ಯವಹಾರ ಮಾಡಿದ ನೆನಪಿದೆಯಾ? ಕರ್ನಾಟಕ ಸರಕಾರ ಕನ್ನಡದ ಉಳಿವಿಗಾಗಿ ಹಾಗು ಅದರ ಬೆಳವಣಿಗೆಗಾಗಿ ಎಷ್ಟೇ ಕಾನೂನು ತಂದರೂ ಅದರ ಪರಿಣಾಮ ನಿಮ್ಮ ಕುಟುಂಬದ ಮೇಲೆ ಯಾಕೆ ಬೀರಲಿಲ್ಲ ಎನ್ನುವುದು ಆಶ್ಚರ್ಯವೆ? ಅದವಾ ನಿಮಗೆ ಕಾನೂನಿನ ಅರವಿಲ್ಲವಾ?

ಕಟ್ಟ ಕಡೆಯ ತುಳುವ -  ಸರ್ ನನ್ನ ಮನೆ ಇರುವುದು ಪುತ್ತೂರು ಹಾಗು ಸುಳ್ಯದ ದಟ್ಟ ಕಾಡಿನ ಒಳಗೆ ನಾವೇ ನಾಡಿಗೆ ಬರಲು ಕಷ್ಟ ಪಡುತ್ತೇವೆ, ಇನ್ನೂ ಸರಕಾರದ ಜನರು ಈ ಬಡ ತುಳುವನಿಗೋಸ್ಕರ ಯಾಕೆ ಬರಬೇಕು?
ಇನ್ನು ನಾವು ಪೇಟೆಗೆ ಹೋದರೆ ಯಾರಲ್ಲಿ ತುಳು ಮಾತಾಡಲಿ  ಹೇಳಿ? ಇನ್ನು ನಾನು ತುಳು ಮಾತಾಡಿದರೆ ಕನ್ನಡ ಸಂಘ ಸಂಸ್ಥೆಗಳ ಸಹಾಯದಿಂದ ಈ ಸರಕಾರ ಯಾವುದಾದರೂ ಕೇಸ್ ಜಡಿದು ಜೈಲಿಗೆ ಕಳಿಸುತ್ತಾರೆ ಎನ್ನುವ ಸತ್ಯ ಗೊತ್ತಿದೆ ಸರ್.. 😳

ಸಂದರ್ಶಕ - ಆಯಿತು ನಿಮ್ಮ ಮಾತು ಇಲ್ಲಿ ಯಾರು ಕೇಳುವುದಿಲ್ಲ ಹಃ ಹಃ.. ನಮ್ಮ ಮಾತನ್ನು ಆಮೇಲೆ ಆಲಿಸುತ್ತೇವೆ. ನಮ್ಮ ಜೊತೆಯಲ್ಲಿ ಕನ್ನಡ ಸರಕಾರದ ಎಮ್ಮೆಯ ಮುಖ್ಯಮಂತ್ರಿ ಹಾಗು ರಕ್ಷಣಾವೇದಿಕೆಯ ಅಧ್ಯಕ್ಷರಾದ ಮಾನ್ಯ ಚೀ. ರೆ.ಬ್ಯಾ ಗೌಡರು ಇದ್ದಾರೆ.

ಸರ್...  ನೀವು ನಿಮ್ಮ ಜೀವಿತವನ್ನು ಕನ್ನಡಕೊಸ್ಕರ ಮುಡಿಪಾಗಿಟ್ಟಿದ್ದೀರ? ಕನ್ನಡಕೊಸ್ಕರ ಹವಾಯಿ ಚಪ್ಪಲಿ ಹಾಕಿ ಬೆಂಗಳೂರಿಗೆ ಕೆಂಪು ಬಸ್ ಹತ್ತಿ ಬಂದು ಅನ್ಯ ಬಾಷೆಯ ಧ್ವನಿಯನ್ನು ಅಡಿಗಿಸಿದ್ದೀರಿ, ನಿಮ್ಮ ಸಂಘಟನೆಯಿಂದಲೆ ತುಳುನಾಡಿನಲ್ಲಿ ತುಳು ಹಾವಳಿಯನ್ನು ಕಡಿಮೆ ಮಾಡಿದ ಇಂತಹ ಅದ್ಭುತ, ಕ್ರಾಂತಿಕಾರಿ ಕೆಲಸವನ್ನು ನಿಮ್ಮ ಸಂಘಟನೆಗೆ ಸಲ್ಲುತ್ತದೆ, ಅದಕ್ಕೆ ಅಭಿನಂದನೆಗಳು ಹಾಗು ನಿಮ್ಮ ಪಕ್ಷವು ಇಂತಹ ಒಳ್ಳೆಯ ಕೆಲಸವನ್ನು ಹೇಗೆ ಮಾಡಿದ್ದೀರಿ? ಆದರೆ ಇನ್ನೂ ನಮ್ಮ ರಾಜ್ಯದಲ್ಲಿ ಇಂತಹ ಕನ್ನಡ ವಿರೋಧಿಗಳು ನಿಮ್ಮ ಕಣ್ಣಿಗೆ ಬೀಳದೆ ತುಳು ಪರವಾಗಿ ಕೆಲಸ ಮಾಡುವವರು ಉಳುಕೊಂಡಿದ್ದಾರೆ ಅಂದರೆ ಇದು ನಿಮ್ಮ ವೈಫಲ್ಯ ಅನಿಸುದಿಲ್ಲವಾ?

ಮುಖ್ಯಮಂತಿ- ಚೀ.ರ.ಬ್ಯಾ - ನಾನು ರಾಜ್ಯಕೀಯಕ್ಕೆ ಬರುವ ಮೊದಲು ಮಾಡದ ಕೆಲಸವೆಂದರೆ ಹಿಂದಿ ನಿಷೇಧ ಹಾಗು  ಅಲ್ಲಿನ ಪ್ರಬಲವಾದ ರಕ್ಷಣಾವೇದಿಕೆಯನ್ನು ನಮ್ಮ ಸಂಘಟನೆಯ ಜೊತೆ ಸೇರಿಸಿ ಅಲ್ಲಿನ ಜನರನ್ನು ಕನ್ನಡಿಕರಣ ಮಾಡಿದ್ದು, ಈಗ ಅವರು ನಮ್ಮ ಸಂಪುಟದ ಮಂತ್ರಿಯಾಗಿದ್ದಾರೆ..
ಇನ್ನು ನಾವು ಅಧಿಕಾರ ಬಂದ ಮೇಲೆ ಅಲ್ಲಿನ ಇನ್ನೊಂದು ಸಂಘಟನೆಯ ಜನರನ್ನು ರಾಜ್ಯ ದ್ರೋಹದ ಅಡಿಯಲ್ಲಿ ಅನೇಕ ಕೇಸ್ ಹಾಕಿ ಜೈಲಲ್ಲಿ ಕಂಬಿ ಎಣಿಸುತ್ತಿದ್ದಾರೆ..ಈಗ ಎಲ್ಲಿದೆ ತುಳುನಾಡು? ನಮ್ಮ ಅಜೆಂಡ ಒಂದೇ ಒಂದು ರಾಜ್ಯ ಒಂದು ಬಾಷೆ! ಅದರಲ್ಲಿ ನಾವು ಯಶಸ್ವಿಯಾಗಿದ್ದೇವೆ ಅನಿಸುತ್ತದೆ.. ಕನ್ನಡ ಬಾಷೆಯ ಬಗೆ ಅನ್ಯಾಯ ಅದಾಗ ಪ್ರತ್ಯೇಕ ದೇಶಕ್ಕಾಗಿ ಹೋರಾಟವನ್ನು ಮಾಡಿದ್ದೇವೆ, ಇದು ತಪ್ಪಲ್ಲ,

ಸಂದರ್ಶಕ - ಅದಕ್ಕಿಂತ ನೀವು ತುಳುನಾಡಿನ ಸಂಸ್ಕೃತಿ ಎಂದು ಜನರಲ್ಲಿ ಮೂಡನಂಬಿಕೆಯಾದ ಭೂತರಾದನೆ, ನೇಮ, ಅಗೆಲು, ಕೊಲ ಮುಂತಾದವುಗಳನ್ನು ಅನೇಕ ಕಾನೂನು ತಂದು ನಿಷೇಧ ಮಾಡಿದ್ದು, ಇದರ ಬಗೆ ಹೆಮ್ಮೆ ಎನಿಸುತ್ತದೆ, ಸರಿಯಾಗಿ ನೋಡಿದರೆ ತುಳುವರದ್ದು ಎನ್ನುವುದು ಯಾವುದು ಇಲ್ಲ,

ಕಟ್ಟ ಕಡೆಯ ತುಳುವ - ಮಾನ್ಯ ಮುಖ್ಯಮಂತ್ರಿಗಳೆ ನನ್ನದು ಒಂದು ಕೋರಿಕೆ ಇದೆ. ನಿಮ್ಮ ಕಾಲು ಇಡಿದು ಬೇಡಿ ಕೊಳ್ಳುತ್ತೇನೆ.. ದಯವಿಟ್ಟು ಅದರ ಬಗೆ ಒಮ್ಮೆ ಗಮನ ಕೊಡಿ.

ಮುಖ್ಯಮಂತಿ- ಚೀ.ರ.ಬ್ಯಾ - ಏನೋ ನಿನ್ನ ಗೋಳು? ನೋಡೋಣ ಕನ್ನಡಿಗರು ಒಪ್ಪಿದರೆ ಚಿಂತಿಸೊಣ.

ಕಟ್ಟ ಕಡೆಯ ತುಳುವ - ಮಾನ್ಯ ಮುಖ್ಯಮಂತ್ರಿಗಳೆ ನಾವು ತುಳು ಭಾಷೆಯನ್ನು ಸವೀಂಧಾನ 8 ನೇ ಪರಿಚ್ಛೇದಕ್ಕೆ ಸೇರಿಸುವ ಬಗೆ ಸುಮಾರು 80 ವರ್ಷಗಳಿಂದ ಹೋರಾಟ ಮಾಡುತ್ತಿದ್ದೇವೆ, ಫಲಿತಾಂಶ ಸೊನ್ನೆ. ಬಗೆ ಕೇಂದ್ರ ಸರಕಾರಕ್ಕೆ ಮನವಿ ಸಲಿಸಿ ನಮ್ಮ ಭಾಷೆಯನ್ನು ಉಳಿಸಬೇಕು, ಹಾಗು ಇನ್ನೊಂದು ಮನವಿ ತುಳು ಭಾಷೆಯನ್ನು ಕರ್ನಾಟಕದ ಅಧಿಕೃತ ಹಾಗು ಎರಡನೆಯ ಭಾಷೆಯಾಗಿ....

ಅವನ ಮಾತನ್ನು ತುಂಡರಿಸಿ ಕೆಂಡಮಂಡಲವಾದ ಮುಖ್ಯಮಂತ್ರಿಯು ಕಟ್ಟ ಕಡೆಯ ತುಳುವನಿಗೆ ನಿನಗೆ ಇಲ್ಲಿ ಸಂದರ್ಶನ ಮಾಡಲು ಬಿಟ್ಟಿದ್ದೇ ತಪ್ಪು.. ಇನ್ನೂ ಬೆರಳೆಣಿಕೆಯ ಜನ ಇರುವ ನಿನ್ನ ಭಾಷೆಯನ್ನು ರಾಜ್ಯದ ಅಧಿಕೃತ ಭಾಷೆಯಾಗಿ ಮಾಡಬೇಕಾ? ಇದು ಅತಿಯಾದ ಬೇಡಿಕೆ ಅನಿಸುವುದಿಲ್ಲವಾ?
ಇನ್ನೂ ಸವಿಂಧಾನದ 8ನೇ ಪರಿಚ್ಛೇದದ ಬಗೆ ಕೇಂದ್ರ ಸರಕಾರಕ್ಕೆ ನೀನು ಮನವಿ ಸಲಿಸಬೇಕಾಗಿರುವುದು ನೀವು ಕನ್ನಡಿಗರು ಅಲ್ಲ, ಏನಾದರು ಕೇಂದ್ರದಲ್ಲಿ ನಮ್ಮ ಕನ್ನಡ ಸರಕಾರ ಅಧಿಕಾರಕ್ಕೆ ಬಂದರೆ ನಿನ್ನ ಬೇಡಿಕೆಯನ್ನು ಪೂರೈಸುತ್ತೇವೆ, ಈಗ ಉಳಿದಿರುವ ಬೆಳಣಿಕೆಯ ತುಳುವರನ್ನು ಕರೆದುಕೊಂಡು ದೆಹಲಿಗೆ ಬೇಡಿಕೆ ಸಲೀಸು, ನಾವು ಬಾಹ್ಯ ಬೆಂಬಲವಾಗಿ ನಿಲ್ಲುತ್ತವೆ..

ಸಂದರ್ಶಕ - ನಿಮಗೆ ಇಷ್ಟು ಭರವಸೆ ಯಾರು ಕೊಡುವುದಿಲ್ಲ,   ಸಂತೋಷದಿಂದ ನೀವು ಊರಿಗೆ ಮರಳಬಹುದು.. ಕೊನೆಯದಾಗಿ ನಿಮಗೆ ಗೊತ್ತಿರುವ ಒಂದು ತುಳು ವಾಕ್ಯ ಹೇಳಿ?

ಕಟ್ಟ ಕಡೆಯ ತುಳುವ - ಕೈ ಮುಗಿದು  "ಅಣ್ಣಾ ಎನ್ನನ್ ಬುಡ್ಲೆ ಊರುಡ್ ನಾಲ್ ನುಪ್ಪು ತಿನ್ತ್ ಬದುಕೊನುವೆ"...

ಸಂದರ್ಶಕ - ಕೋಪದಿಂದ, ಇವರು ಮಾತಿನ ಅರ್ಥ ಆ ದೇವರಿಗೆ ಗೊತ್ತು.. ಕನ್ನಡದ ಬಗೆ ಬೈದ ರೀತಿಯಲ್ಲಿ ಇದೆ, ಇದರ ಬಗೆ ಇನ್ನಷ್ಟು ಕೇಳುವ ಮೊದಲು ಒಂದು ಕಮರ್ಷಿಯಲ್ ಬ್ರೇಕ್....

(ಭಾಗ ಒಂದು ಮುಂದುವರಿಯುತ್ತದೆ)

ರಿಪೋರ್ಟರ್ - ಮಾಜಿ ತುಳುವೇ ..
Copy post

Monday, 17 July 2017

ಸದಾಶಿವ ಬ್ರಹ್ಮಾವರ

ಸದಾಶಿವ ಬ್ರಹ್ಮಾವರ
ಉಡುಪಿ ಜಿಲ್ಲೆಯ ಬ್ರಹ್ಮಾವರದ ಬಡ ಮನೆತನದಲ್ಲಿ ಹುಟ್ಟಿದ ಬಾಲಕ ಸದಾಶಿವ ಬ್ರಹ್ಮವಾರ ಅನಿವಾರ್ಯವಾಗಿ ರಂಗಭೂಮಿಯ ವಿಂಗಿನಲ್ಲಿ ಬೆಳೆಯಬೇಕಾಗಿ ಬಂತು. ಅಲ್ಲಿ ಪರದೆ ಹಿಡಿಯುವುದರಿಂದ ಹಿಡಿದು ಪೋಷಕ ಪಾತ್ರಗಳನ್ನು ವಹಿಸುವಲ್ಲಿಯವರೆ
ಗಿನ ಎಲ್ಲ ಕೆಲಸಗಳನ್ನೂ ಕರಗತ ಮಾಡಿಕೊಂಡರು.


”ನನಗೆಲ್ಲ ಗೊತ್ತು,” ಎಂದು ಯಾವತ್ತೂ ಗರ್ವ ತೋರದೇ, ಸರ್ವರೊಳಗೊಂದಾಗಿ ಬೆರೆತರು. ಅನ್ನವಿಕ್ಕಿ, ಆಶ್ರಯವಿತ್ತು, ಆತ್ಮೀಯತೆಯಿಂದ ನೋಡಿಕೊಂಡ ಎಲ್ಲರ ಬಗ್ಗೆಯೂ ಅವರಿಗೆ ಗೌರವ, ವಿನೀತಭಾವ.

ತಮ್ಮ ಹದಿನೈದನೆಯ ವರ್ಷದಿಂದಲೇ ಕಲಾಭೂಷಣ ಏಣಗಿ ಬಾಳಪ್ಪನವರ ‘ಕಲಾವೈಭವ ನಾಟ್ಯ ಸಂಘ’ದಲ್ಲಿ ಕೆಲಸ ಮಾಡತೊಡಗಿದ ಸದಾಶಿವ, ಊರಿನ ಹೆಸರನ್ನೇ ಅಡ್ಡ ಹೆಸರನ್ನಾಗಿ ಇಟ್ಟುಕೊಂಡರು. ಸದಾಶಿವ ಬ್ರಹ್ಮಾವರರನ್ನು ಇವತ್ತಿಗೂ ಶತಾಯುಷಿ ಏಣಗಿ ಬಾಳಪ್ಪನವರು ಪುತ್ರವಾತ್ಸಲ್ಯದಿಂದಲೇ ಕಾಣುತ್ತಾರೆ. ಇವರೂ ಅಷ್ಟೇ ; ಬಾಳಪ್ಪನವರನ್ನು ‘ಮಾಲಿಕರೆಂದೇ’ ಕರೆಯುತ್ತಾರೆ.

ಕಲಾವೈಭವ ನಾಟ್ಯ ಸಂಘ’ ಮುಚ್ಚಿದ ಮೇಲೆ ಬೇರೆ ಬೇರೆ ನಾಟಕ ಕಂಪನಿಗಳಲ್ಲಿ ಕೆಲಸ ಮಾಡಿದ ಸದಾಶಿವ ಬ್ರಹ್ಮಾವರ ಅವರು ಗಾಂಧೀ ನಗರದ ನಿರ್ಮಾಪಕರ ಕಣ್ಣಿಗೆ ಬಿದ್ದರು. ಆಗಿನಿಂದ ಈ ತನಕ ಏನಿಲ್ಲೆಂದರೂ ಇನ್ನೂರು ಕನ್ನಡ ಸಿನಿಮಾಗಳಲ್ಲಿ ತಂದೆ, ತಾತ, ಮನೆಯಾಳು, ಶಾಲಾ ಶಿಕ್ಷಕ ಹೀಗೆ ಪೋಷಕ ಪಾತ್ರಗಳಲ್ಲೇ ಕಾಣಿಸಿಕೊಳ್ಳುತ್ತ, ಕನ್ನಡ ಚಿತ್ರ ರಸಿಕರ ಮನದಲ್ಲಿ ಆತ್ಮೀಯರಾಗಿ ಕೂತವರು. ಯಾವುದೇ ದುಶ್ಚಟಗಳಿಗೆ ಬಲಿಯಾಗದೇ, ಆರೋಗ್ಯವನ್ನು ಕಾಪಾಡಿಕೊಂಡು ಬಂದಿರುವ ಸದಾಶಿವ ಬ್ರಹ್ಮಾವರ ಅವರೊಂದಿಗೆ ಮಾತಾಡುವುದೇ ಒಂದು ಆನಂದದ ಅನುಭವ ನೀಡುತ್ತದೆ.

ಇಂಥ ಸ್ವಾಭಿಮಾನಿ ಹಿರಿಯರಿಗೆ 2015ರ ‘ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ’ ದೊರೆತಿರುವುದು ಆ ಪ್ರಶಸ್ತಿಗೆ ನಿಜಕ್ಕೂ ಬೆಲೆ ಬಂದಂತಾಗಿದೆ.

ರಂಗಭೂಮಿಯ ನಡೆದಾಡುವ ವಿಶ್ವಕೊಶವೇ ಆಗಿರುವ ಸದಾಶಿವ ಬ್ರಹ್ಮಾವರ ಅವರಿಗೆ ಈ ಮೂಲಕ ನನ್ನ ಅಭಿನಂದನೆಗಳು.💐

#copyPaste

ತುಳುವರು ಆಲೋಚಿಸಬೇಕು

ತುಳುವೆರ್ ಆಲೋಚನೆ ಮಲ್ಪೊಡು

ಕನ್ನಡ ಬಾಸೆ ಬುಲೆಪಾಯರೆ ಕನ್ನಡದ ಜನ ಸಂಖ್ಯೆ ಉಂಡು, ಕನ್ನಡ ಸರಕಾರ ಉಂಡು.
ಮಲಯಾಳಂ ಬುಲೆಪಾಯರೆ ಮಲಯಾಳಿಲು ಉಲ್ಲೆರ್, ಕೇರಳ ಸರಕಾರ ಉಂಡು.
ತುಳುಕು ಏರ್ ಉಲ್ಲೆರ್? ಉಪ್ಪುನ ಮುಜಿ ಜಿಲ್ಲೆಡ್ಲಾ ತುಳುನು ಬರಿಕ್ ದೀದ್ ಕನ್ನಡ-ಮಲಯಾಳಂ ಬುಲೆಪಾವುನಕುಲೇ ಉಲ್ಲೆರ್,
ಕನ್ನಡ-ಮಲಯಾಳಂ ದ ಮೆಂಟಲಿಟಿದಕುಲೇ ಉಪ್ಪುನು
ಅಪ್ಪೆನ್ ನೆಲಟ್ ಕುಲ್ಲಾದ್, ಬರಿತಿಲ್ಲದ ಆಂಟಿನ್ ದಂಡಿಗೆಡ್ ಕುಲ್ಲಾವುನ ವಾ ನ್ಯಾಯ?

ತುಳುವರು ಆಲೋಚಿಸಬೇಕು
ಕನ್ನಡ ಬಾಷೆ ಬೆಳೆಸಲು ಉಳಿಸಲು ಕರ್ನಾಟಕ ರಾಜ್ಯವಿದೆ ಅಪಾರ ಜನ ಸಂಖ್ಯೆ ಇದೆ
ಮಲಯಾಳಿ ಬಾಷೆ ಬೆಳೆಸಲು ಉಳಿಸಲು ಕೇರಳ ರಾಜ್ಯವಿದೆ ಅಪಾರ ಜನ ಸಂಖ್ಯೆ ಇದೆ
ಆದರೆ ತುಳು ಬಾಷೆ ಬೆಳೆಸಲು ಉಳಿಸಲು ಕೇವಲ 3 ಜಿಲ್ಲೆ ಮಾತ್ರ
ಅದರಲ್ಲು ಕೆಲವರು ಕನ್ನಡ ಕರ್ನಾಟಕ ಎಂದು ಹೋರಡುತಿದ್ದಾರೆ
ತುಳುವರು ತಮ್ಮ ತಾಯಿಯನ್ನು ಮರೆಯುತಿದ್ದರೆ

ಆಟಿ ತಿಂಗಳು:

ಆಟಿ ತಿಂಗಳು:

ಕಾರ್ತೆಲ್ ತಿಂಗಳು ಕಳೆದು ನಾವು ಕಾಲಿಡುವುದೇ ಆಟಿ ತಿಂಗಳಿಗೆ. ಸೌರಮಾನ ಪದ್ಧತಿಯ ನಾಲ್ಕನೇ ಮಾಸ ಆಟಿ ತಿಂಗಳು. ಶುಭ ಕಾರ್ಯಗಳು ಆಟಿ ಮಾಸದ ವೈರಿಗಳು. ಹೆಚ್ಚಿನ ರೋಗರುಜಿನಗಳು ಬಾಧಿಸುವ ತಿಂಗಳು ಇದೆಂದು ತುಳುಜನರ ನಂಬಿಕೆ. ಈ ತಿಂಗಳಲ್ಲಿ ಎಲ್ಲೆಲ್ಲೂ ಬಡತನ. ಕೂಡಿಟ್ಟ ಧಾನ್ಯಗಳೆಲ್ಲವು ಖಾಲಿಯಾಗಿ ಅಟ್ಟ ಗುಡಿಸುವ ಕಾಲ. ಯಾವುದೇ ಬೆಳೆಗಳನ್ನು ಬೆಳೆಯಲಾಗದ ಮಾಸವಿದು. ಗಂಡಸರು ನಾಟಿಯಿಲ್ಲದೆ ಮನೆಯಲ್ಲೇ ಇರುವಾಗ ಹೊಟ್ಟೆಯ ಹಸಿವಿಗಾಗಿ ಪ್ರಕೃತಿಯನ್ನು ಅರಸುವ ಸಮಯ. ಈ ಸಂದರ್ಭದಲ್ಲಿ ಮಾನವ ಮತ್ತು ಪ್ರಕೃತಿಯ ಅವಿನಾಭಾವ ಸಂಬಂಧ ಮನೆ ಮಾಡುತ್ತದೆ. ಹಸಿವಿನಿಂದಿರುವ ಮಕ್ಕಳಿಗೆ ತನ್ನೊಡಲ ಹಸಿರನ್ನು ನೀಡುವ ಭೂಮಿತಾಯಿ ಕರುಣಾಮಯಿ.
ಎಲ್ಲೆಡೆಯಲ್ಲಿ ಪಸರಿಸಿರುವ ಕೆಸುವಿನ ಎಲೆಯನ್ನು ಸುರುಳಿಯಾಗಿ ಮಡಿಸಿ ಗಂಟು ಹಾಕಿ ಮಾಡುವ ಪದಾರ್ಥ ತೇಟ್ಲ, ಪತ್ರೊಡೆ. ನುಗ್ಗೆ ಸೊಪ್ಪಿನ ಜೊತೆ ಮಳೆಗಾಲಕ್ಕೆ ಸಂಗ್ರಹಿಸಿಟ್ಟ ಹಲಸಿನ ಬೀಜ ಸೇರಿಸಿ ಪಲ್ಯ. ಬುದ್ಧಿ ಬೆಳವಣಿಗೆಗೆ ತಿಮರೆ ಚಟ್ನಿ, ತಜಂಕ್ ಪಲ್ಯ, ಕಿರಾತ ಕಡ್ಡಿ ಕಷಾಯ, ಮಾವಿನಕಾಯಿ ಗೊಜ್ಜು ಪಲ್ಯ, ಹಲಸಿನ ಸೊಳೆ (ಉಪ್ಪಡ್ ಪಚ್ಚಿಲ್), ಉಪ್ಪಿನಕಾಯಿ, ಕಣಿಲೆ (ಎಳೆ ಬಿದಿರು)ಪಲ್ಯ. ವಿವಿಧ ಬಗೆಯ ಹಪ್ಪಳಗಳು, ಹುರಿದ ಹುಣಸೆ ಬೀಜ ಸಂಜೆ ಹೊತ್ತಿಗೆ ಮಳೆಗೆ ಬಚ್ಚನೆ ಮುದು ನೀಡುವ ಕುರುಕುರು ತಿನಿಸುಗಳು. ಮೆತ್ತೆಗಂಜಿ, ಒಲ್ಲೆಕೊಡಿ ಕಷಾಯಗಳು ತುಳುಜನರ ಹಸಿವಿಗಾಗುವ ಅಮೃತಗಳು. ಪಟ್ಟಿ ಮಾಡಿದರೆ ಮಗಿಯದ ತಿನಿಸುಗಳ ಸಾಲುಗಳು.

ಆಟಿ ಅಮಾವಾಸ್ಯೆ ಎಂದರೆ ಹಾಲೆ ಮರದ ತೊಗಟೆಯ ಕಷಾಯ (ಪಾಲೆದ ಕೆತ್ತೆದ ಕಷಾಯ)ವೆಂದೇ ಹೆಸರುವಾಸಿಯಾಗಿರವ ರಥದ ಅಕಾರದಲ್ಲಿ ಗೆಲ್ಲು ಎಲೆಗಳನ್ನು ಹರಡಿ, ಎತ್ತರಕ್ಕೆ ಬೆಳೆಯುವ ಹಾಲೆ ಮರದ ಹಾಲನ್ನು ಕುಡಿದು ಬೆಲ್ಲ ಚಪ್ಪರಿಸುವ ಸಂಭ್ರಮ. ಕಡು ಕಷ್ಟದ ತಿಂಗಳೆಂದೇ ಉಲ್ಲೇಖವಿರುವ ಆಟಿ ಮಾಸದಲ್ಲಿ ಅಮಾವಾಸ್ಯೆ ಹಿಂದಿನ ದಿನ ಸಂಜೆ ಮರಕ್ಕೆ ನೂಲು ಕಟ್ಟಿ ‘ನಾಳೆ ಬರುತ್ತೇನೆ ಮದ್ದು ಸಿದ್ಧ ಮಾಡಿ ಇಡು’ ಎಂದು ವನದೇವತೆಯನ್ನು ಪ್ರಾರ್ಥಿಸಿ ಬರುವ ಕ್ರಮವಿದೆ. ಮರುದಿನ ಸೂರ್ಯ ಹುಟ್ಟುವ ಮುನ್ನ ಗಂಡಸರು ಬೆತ್ತಲೆಯಾಗಿ ಹಾಲೆ ಮರದ ಬಳಿ ಹೋಗಿ, ಕಲ್ಲಿನಿಂದ ಹಾಲೆಯ ತೊಗಟೆಯನ್ನು ಜಜ್ಜಿಕೊಂಡು ಬರುವುದು. ತೆಗೆದ ರಸವನ್ನು ಕರಿಮೆಣಸು, ಜೀರಿಗೆ, ಓಮ, ಬೆಳ್ಳುಳ್ಳಿ ಜೊತೆ ಅರೆದು ಮಿಶ್ರಣ ಮಾಡಿ, ಬೊರ್ಗಲ್ (ಬೆಣಚು ಕಲ್ಲು) ಅನ್ನು ಬಿಸಿ ಮಾಡಿ ಮಿಶ್ರಣಕ್ಕೆ ಮುಳುಗಿಸುತ್ತಾರೆ. ನಂತರ ಸಾಸಿವೆ ಒಗ್ಗರಣೆ ಕೊಟ್ಟು ಖಾಲಿ ಹೊಟ್ಟೆಗೆ ಮಕ್ಕಳಿಂದ ಹಿಡಿದು ಮುದುಕರ ವರೆಗೂ ಕಷಾಯವನ್ನು ಕುಡಿಯುತ್ತಾರೆ. ಬಾಯಿಯ ಕಹಿಗೆ ಬೆಲ್ಲ, ಉಷ್ಣಕ್ಕೆ ದೇಹಕ್ಕೆ ತಂಪಾದ ಮೆತ್ತೆಗಂಜಿ ಸೇವಿಸುವುದು ವಾಡಿಕೆ. ನವೆಂಬರ್-, ಡಿಸೆಂಬರ್ ತಿಂಗಳಲ್ಲಿ ಹೂ ಬಿಡುವ ಈ ಮರದಲ್ಲಿ ಆಟಿ ಅಮಾವಾಸ್ಯೆಯ ದಿನ ಸಾವಿರದ ಒಂದು ಬಗೆಯ ಔಷಧಿಗಳು ಸೇರಿಕೊಂಡಿರುತ್ತವೆ ಎಂಬ ನಂಬಿಕೆ ಇದೆ. ಇದರ ಹೂವಿನ ಪರಿಮಳ ಮತ್ತೇರಿಸುವಂತಹದ್ದು, ಮನುಷ್ಯ ಬಿಟ್ಟು ದುಂಬಿಗಳು ಕೂಡ ಮರದ ಬಳಿ ಸುಳಿಯುವುದಿಲ್ಲ. ಹಾಲೆ ಮರದ ತಾಯಿ ಬೇರು ಕಂಡವರಿಲ್ಲ ಎಂಬ ಮಾತು ಕೂಡ ತುಳುನಾಡಿನಲ್ಲಿ ಚಾಲ್ತಿಯಲ್ಲಿದೆ.

ಊರಿಗೆ ಹಿಡಿದಿರುವ ಎಲ್ಲ ದೋಷಗಳನ್ನು ಓಡಿಸುವ ಸಲುವಾಗಿ ಊರಗಡಿಯಾಚೆ ಮಾರಿಗೆ ಪ್ರಾಣಿಗಳನ್ನು ಬಲಿ ಕೊಡುವ ‘ಮಾರಿ ದೇರುನಿ’ ಸಹ ಆಟಿ ತಿಂಗಳ ಪದ್ಧತಿಗಳಲ್ಲಿ ಒಂದು.
ದುಡಿಮೆಗೆ ವಿರಾಮ ನೀಡಿರುವ ಈ ಸಮಯದಲ್ಲಿ ತುಳುಜನರು ಆಟಗಳ ಕಡೆಗೆ ಮನಹರಿಸುತ್ತಾರೆ. ಚೆನ್ನೆಮಣೆ, ಪೊಕ್ಕು, ಸರಿಮುಗುಳಿ, ಎದ್‌ರ್ ದೆಸೆ (ಒಬ್ಬರ ಒಗಟಿಗೆ ಇನ್ನೊಬ್ಬರು ಉತ್ತರಿಸುವುದು), ತೆಂಗಿನಕಾಯಿ ಆಟಗಳೆಲ್ಲವೂ ಮನಸ್ಸಿಗೆ ಮುದ ನೀಡುವಂತಹ ಆಟಗಳು. ಕತ್ತಲಾವರಿಸಿದಾಗ ಮನೆಮಂದಿಯೆಲ್ಲಾ ಸೇರಿಕೊಂಡು ಸಂತೋಷಕ್ಕಾಗಿ ಪಾರ್ದನ (ತುಳುವ ದೈವಗಳ ಮತ್ತು ವೀರ ಪುರುಷರ ಚರಿತ್ರೆಯನ್ನು ಹೇಳುವ ಜನಪದ ಪದ್ಯಗಳು) ಹಾಡುವ ಕಾಲವಿದು.

ತುಳುನಾಡಿನ ಜಾನಪದ ಸಂಸ್ಕೃತಿಯಲ್ಲಿ ಚೆನ್ನೆಮಣೆಯಾಟ ಬಹಳ ಪ್ರಾಚೀನವಾದುದು. ಉಳಿದ ಸಮಯದಲ್ಲಿ ಮನೆಯ ಅಟ್ಟದಲ್ಲಿ ಬೆಚ್ಚಗೆ ನೆಲೆ ಕಾಣುವ ಚೆನ್ನೆಮಣೆ ಆಟಿ ತಿಂಗಳಲ್ಲಿ ಮಾತ್ರವೇ ಕೆಳಗಿಳಿಯತ್ತದೆ. ಹಿಂದೆ ಹೊಂಗಾರಕನ ಮರದ ಕಾಯಿಗಳನ್ನು ಆಟದಲ್ಲಿ ಬಳಸುತ್ತಿದ್ದರು ಆದರೆ ಈಗ ಅಂತಹ ಕಾಯಿಗಳು ಅಪರೂಪವಾಗಿರುವುದರಿಂದ ಕವಡೆಕಾಯಿ, ಮಂಜಟ್ಟಿ ಕಾಯಿಗಳನ್ನು ಉಪಯೋಗಿಸುವುದನ್ನು ಕಾಣುವೆವು.
ವರ್ಷವಿಡೀ ಗಂಡನ ಮನೆಯಲ್ಲಿ ಬೆವರು ಸುರಿಸುವ ಹೆಣ್ಣುಮಗಳು, ದೈಹಿಕವಾಗಿ ಹಾಗೂ ಮಾನಸಿಕವಾಗಿ ಚೇತರಿಸಿಕೊಳ್ಳಲು ತವರು ಮನೆಗೆ ಬಂದು (ಆಟಿ ಕುಲ್ಲುನಿ) ಆಟಿ ಕಳೆಯುವುದು ಆಚರಣೆಯಲ್ಲಿ ಬಂದದ್ದು. ರೋಗ ನಿರೋಧಕ ಎನ್ನುವ ಕಾರಣಕ್ಕೆ ಆಟಿಯಲ್ಲಿ ಗದ್ದೆಗೆ, ಮೊದಲ ಬೆಳೆಗೆ ಕಾಸರ್ಕನ ಮರದ ಗೆಲ್ಲನ್ನು ನೆಡುತ್ತಾರೆ. ಗೆಲ್ಲಿನ ಕಹಿಯನ್ನು ಭತ್ತ ಹೀರಿಕೊಂಡಾಗ ಭತ್ತಕ್ಕೆ ಬಂದಿರುವ ರೋಗ ನಿವಾರಣೆಯಾಗುವುದು ಎನ್ನುವರು.
ಊರಿಗೆ ಹಿಡಿದಿರುವ ಕಾಯಿಲೆಗಳನ್ನು, ತೊಂದರೆಗಳನ್ನು ನಿವಾರಿಸುವವನೇ ಆಟಿ ಕೆಳೆಂಜ. ತುಳುನಾಡಿ ತೆಂಕಣ- ಪೂರ್ವ ಪ್ರದೇಶದಲ್ಲಿ ದೈವ ನರ್ತಕರು (ಬಹುತೇಕ ನಲಿಕೆಯವರು) ಕುಣಿಯುವ ಜಾನಪದ ನೃತ್ಯ. ಊರು, ಮನೆಮನೆಗೆ ಸಂಚರಿಸಿ ಆಟಿ ಕೆಳೆಂಜ ಸಂದೇಶವನ್ನು ಸಾರುತ್ತಾನೆ. ಅರಶಿನ ಪುಡಿ ಮತ್ತು ಮಸಿಯನ್ನು ಮಂತ್ರಿಸಿ ಮನೆತನಕ್ಕೆ ಬರುವ ಪೀಡೆ, ದೋಷಗಳು ನಿವಾರಣೆಯಾಗಲೆಂದು ಸುತ್ತ ಎಸೆಯುತ್ತಾನೆ. ಹೀಗೆ ಕುಣಿಯುವ ನರ್ತಕರಿಗೆ ಅಕ್ಕಿ, ಭತ್ತ, ತರಕಾರಿ, ಹಣ ದಾನ ನೀಡುವರು.

ಆಟಿ ಅಮಾವಾಸ್ಯೆಯ ದಿನ ತೀರ್ಥ ಸ್ನಾನ ಮಾಡುವುದು ಕೂಡ ಪ್ರಸಿದ್ಧಿಯಾಗಿದೆ. ಆ ದಿನದಂದು ಎಲ್ಲಾ ಬಗೆಯ ತೀರ್ಥಗಳು ಘಟಿಕಾದಲ್ಲಿ ಸೇರಿರುತ್ತವೆ ಎಂಬುದು ನಂಬಿಕೆ. ಕೊಡಿಪ್ಪಾಡಿ, ಕಾರಿಂಜಬೆಟ್ಟ, ನರಹರಿ ಪರ್ವತ, ಉಪ್ಪಿನಂಗಡಿಯಲ್ಲಿ ನೇತ್ರಾವತಿ ತೀರ್ಥ, ಸಮುದ್ರಸ್ಥಾನ, ಕೇರಳದ ಮುಜುಂಗಾವು, ಧರ್ಮಸ್ಥಳ ಮುಂತಾದೆಡೆಗಳಲ್ಲಿ ಆ ದಿನ ಪವಿತ್ರ ತೀರ್ಥ ಸ್ನಾನ ನಡೆಯುತ್ತದೆ.
ಆಟಿ ತಿಂಗಳ ಕೊನೆಯಲ್ಲಿ ಆಚರಿಸುವುದೇ ನಾಗರಪಂಚಮಿ. ಇಂದು ಇಂತಹ ಆಚರಣೆಗಳನ್ನೆಲ್ಲ ನಾವು ಹಳ್ಳಿ ಪ್ರದೇಶಗಳಲ್ಲೂ ಕಾಣುವುದು ಅಪರೂಪ. ಆಚರಣೆಗಳೆಲ್ಲವು ಇತಿಹಾಸದ ಪುಟಗಳಲ್ಲಿ ಅಕ್ಷರದ ರೂಪ ತಾಳುತ್ತಿವೆ.

ಮೇಘಲಕ್ಷ್ಮಿ

ಆಟಿ ತಿಂಗೊಲ್ದ ಗಾದೆಲು

ಆಟಿ ತಿಂಗೊಲ್ದ ಗಾದೆಲು

ಅಟಿಡ್ ತೆಡಿಲ್‍ ಬತ್ತ್ಂಡ ಆಟ್ಟ ಪೊಲಿಪೋವು, ಸೋಣೊಡು ತೆಡಿಲ್‍ ಬತ್ತ್ಂಡ ಸೊಂಟ ಪೊಲಿಪೋವು
 - ಆಟಿ(ಆಷಾಡ)ಯಲ್ಲಿ ಸಿಡಿಲು ಬಂದರೆ ಅಟ್ಟ ಮುರಿದು ಹೋಗಬಹುದು. ಸೋಣ(ಶ್ರಾವಣ)ದಲ್ಲಿ ಸಿಡಿಲು ಬಂದರೆ ಸೊಂಟ ಮುರಿಯುತ್ತದೆ.

ಆಟಿಡ್‍ ಕಣೆ ಬತ್ತ್ಂಡ ಆಟ್ಟ ಪೊಲಿಪೋವು, ಸೋಣೊಡು ಕಣೆ ಬತ್ತ್ಂಡ ಸೊಂಟ ಪೊಲಿಪೋವು
- ಆಟಿ(ಆಷಾಡ)ಯಲ್ಲಿ ಕಳೆ ಬಂದರೆ ಅಟ್ಟ ಮುರಿದು ಹೋಗಬಹುದು. ಸೋಣ(ಶ್ರಾವಣ)ದಲ್ಲಿ ಕಳೆ ಬಂದರೆ ಸೊಂಟ ಮುರಿದು ಹೋಗಬಹುದು.

ಆಟಿದ ಪೆಲಕಾಯಿ ನಂಜಿ ಮಗಾ- ಆಮ್ಮೆ ಬರ್ಪೆನಾ ತೂಲ ಮಗಾ
- ಆಟಿ(ಆಷಾಡ)ದ ಹಲಸಿನಕಾಯಿ ನಂಜು ಮಗಾ, ಅಪ್ಪ ಬರುತ್ತಾನಂತ ನೋಡು ಮಗ

ಅಟಿಡ್‍ ಪೊಣ್ಣು ಪುಟ್ಟುನು ಹೆಚ್ಚಗೆ
-ಆಟಿ(ಆಷಾಡ) ತಿಂಗಳಲ್ಲಿ ಹೆಣ್ಣು ಹುಟ್ಟುವುದು ಹೆಚ್ಚು.

ಆಟಿದ ದೊಂಬು ಆನೆದ ಬೆರಿ ಪುಡಾವು
- ಆಟಿ(ಆಷಾಡ)ದ ಬಿಸಿಲು ಆನೆಯ ಬೆನ್ನು ಒಡೆದೀತು